Tuesday, March 17, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸ್ಮಶಾನ ಭೂಮಿ ಕೊರತೆ: ಮಾರ್ಗಸೂಚಿ ದರಕ್ಕಿಂತ 3 ಪಟ್ಟು ಹಣ ನೀಡಿ ಜಮೀನು ಖರೀದಿಸಲು ಸರ್ಕಾರ ಸಿದ್ಧ

    Jnanpith Award | ತಮಿಳು ಸಾಹಿತ್ಯಕ್ಕೆ ಸಂದ ಗೌರವ: ಖ್ಯಾತ ಕವಿ ವೈರಮುತ್ತು ಅವರಿಗೆ 2025ರ ‘ಜ್ಞಾನಪೀಠ’ ಪ್ರಶಸ್ತಿ ಗರಿ

    ರಾಜ್ಯದಲ್ಲಿ ಇಂಧನ ಕೊರತೆಯ ಭೀತಿ ಬೇಡ: ಪೆಟ್ರೋಲ್, ಡೀಸೆಲ್ ಪೂರೈಕೆ ಸುಗಮ – ಕರ್ನಾಟಕ ಪೆಟ್ರೋಲಿಯಮ್ ವ್ಯಾಪಾರಿಗಳ ಸಂಘಟನೆ ಸ್ಪಷ್ಟನೆ

    FSSASI News | ಆಹಾರ ಉದ್ಯಮಿಗಳಿಗೆ ಗ್ಯಾಸ್ ಕೊರತೆ ತಲೆಬಿಸಿ‌ ಮಧ್ಯೆ ಖುಷಿಯ ಸುದ್ದಿ: FSSASI ಪರವಾನಗಿ ಇನ್ಮುಂದೆ ‘ಜೀವಿತಾವಧಿ’ ಮಾನ್ಯತೆ

    ISRO CE20 | ಇಸ್ರೋ ಸಾಧನೆ: ಮಹೇಂದ್ರಗಿರಿಯಲ್ಲಿ 22 ಟನ್ ಸಾಮರ್ಥ್ಯದ CE20 ಕ್ರಯೋಜೆನಿಕ್ ಇಂಜಿನ್ ಪರೀಕ್ಷೆ ಯಶಸ್ವಿ

    ಹರಿದ್ವಾರದ ಬಿಎಚ್‌ಇಎಲ್ ಘಟಕಕ್ಕೆ ಎಚ್.ಡಿ.ಕೆ ಭೇಟಿ: ನೌಕಾಸೇನೆಗೆ ಸುಧಾರಿತ ಗನ್ ಮೌಂಟ್ ಅರ್ಪಣೆ, ಸೌರಶಕ್ತಿ ಘಟಕ ಲೋಕಾರ್ಪಣೆ

    ರೈಲ್ವೇ ನಿಲ್ದಾಣದ ಪ್ರಾತಿನಿಧಿಕ ಚಿತ್ರ

    Indian Railway Logistics | ಭಾರತೀಯ ರೈಲ್ವೆ: ಸರಕು ಸಾಗಣೆ ದಕ್ಷತೆ ಹೆಚ್ಚಿಸಲು ಬಹು ಮದರಿಯ ಬೃಹತ್ ಕಾರ್ಯತಂತ್ರ ಜಾರಿ

    BW ANALYSYS | ಆಪರೇಷನ್ ಎಪಿಕ್ ಫ್ಯೂರಿ 2026: ಇರಾನ್ ಸಂಘರ್ಷದ ಜಾಗತಿಕ ಕಂಪನ ಮತ್ತು ಭಾರತದ ಮೇಲಾಗುವ ಗಂಭೀರ ಪರಿಣಾಮಗಳು

    LPG GAS SUPPLY | ಅಡುಗೆ ಅನಿಲ ಕೊರತೆ ಭೀತಿ ಬೇಡ: ಗೃಹ ಬಳಕೆಗೆ ತೊಂದರೆಯಿಲ್ಲ, ಮಿತಬಳಕೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ

  • Bengaluru Focus

    ಡಿ.ವಿ.ಜಿ. ಹಾಕಿಕೊಟ್ಟ ಮಾರ್ಗವೇ ಪತ್ರಕರ್ತರಿಗೆ ದಾರಿದೀಪ: ಕೆ.ಯು.ಡಬ್ಲ್ಯು.ಜೆ ಸಂಘದಿಂದ ಸಂಭ್ರಮದ ಆಚರಣೆ

    Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

    GBA Head Office Image

    ಜಿಬಿಎ ಹಾಗೂ ಪಾಲಿಕೆಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯಕ್ಕೆ ಆಗ್ರಹ: ಅಧಿಕಾರಿಗಳ ‘ಹಾಜರಾತಿ ವಂಚನೆ’ಗೆ ಇತಿಶ್ರೀ ಹಾಡಲು ಎನ್.ಆರ್. ರಮೇಶ್ ಒತ್ತಾಯ

    GBA News | ಹಲಸೂರು ಕೆರೆಗೆ ಕಾಯಕಲ್ಪ: 25 ವರ್ಷಗಳ ಹೂಳೆತ್ತಲು ಚಾಲನೆ, ಪ್ರವಾಸಿ ತಾಣವಾಗಿ ಅಭಿವೃದ್ಧಿ

    ರಾಜ್ಯದಲ್ಲಿ ಇಂಧನ ಕೊರತೆಯ ಭೀತಿ ಬೇಡ: ಪೆಟ್ರೋಲ್, ಡೀಸೆಲ್ ಪೂರೈಕೆ ಸುಗಮ – ಕರ್ನಾಟಕ ಪೆಟ್ರೋಲಿಯಮ್ ವ್ಯಾಪಾರಿಗಳ ಸಂಘಟನೆ ಸ್ಪಷ್ಟನೆ

    FSSASI News | ಆಹಾರ ಉದ್ಯಮಿಗಳಿಗೆ ಗ್ಯಾಸ್ ಕೊರತೆ ತಲೆಬಿಸಿ‌ ಮಧ್ಯೆ ಖುಷಿಯ ಸುದ್ದಿ: FSSASI ಪರವಾನಗಿ ಇನ್ಮುಂದೆ ‘ಜೀವಿತಾವಧಿ’ ಮಾನ್ಯತೆ

    BSWML News | ಬೆಂಗಳೂರಿನ ಹಸಿತ್ಯಾಜ್ಯಕ್ಕೆ ಜೈವಿಕ‌ ಅನಿಲ ಮದ್ದು; ಕೋರಮಂಗಲ ಘಟಕಕ್ಕೆ ಮುಖ್ಯ ಆಯುಕ್ತರ ಭೇಟಿ

    ಬಿಡಿಎ ಭರ್ಜರಿ ಕಾರ್ಯಾಚರಣೆ: ಮಲ್ಲತ್ತಹಳ್ಳಿಯಲ್ಲಿ 15 ಕೋಟಿ ರೂ. ಮೌಲ್ಯದ ಭೂಮಿ ವಶ

    GBA News | ಪರವಾನಿಗೆ ಇಲ್ಲದ 7 ಉದ್ದಿಮೆಗಳಿಗೆ ಬೀಗ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಖಡಕ್ ಕ್ರಮ

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    ಸ್ಮಶಾನ ಭೂಮಿ ಕೊರತೆ: ಮಾರ್ಗಸೂಚಿ ದರಕ್ಕಿಂತ 3 ಪಟ್ಟು ಹಣ ನೀಡಿ ಜಮೀನು ಖರೀದಿಸಲು ಸರ್ಕಾರ ಸಿದ್ಧ

    Jnanpith Award | ತಮಿಳು ಸಾಹಿತ್ಯಕ್ಕೆ ಸಂದ ಗೌರವ: ಖ್ಯಾತ ಕವಿ ವೈರಮುತ್ತು ಅವರಿಗೆ 2025ರ ‘ಜ್ಞಾನಪೀಠ’ ಪ್ರಶಸ್ತಿ ಗರಿ

    ರಾಜ್ಯದಲ್ಲಿ ಇಂಧನ ಕೊರತೆಯ ಭೀತಿ ಬೇಡ: ಪೆಟ್ರೋಲ್, ಡೀಸೆಲ್ ಪೂರೈಕೆ ಸುಗಮ – ಕರ್ನಾಟಕ ಪೆಟ್ರೋಲಿಯಮ್ ವ್ಯಾಪಾರಿಗಳ ಸಂಘಟನೆ ಸ್ಪಷ್ಟನೆ

    FSSASI News | ಆಹಾರ ಉದ್ಯಮಿಗಳಿಗೆ ಗ್ಯಾಸ್ ಕೊರತೆ ತಲೆಬಿಸಿ‌ ಮಧ್ಯೆ ಖುಷಿಯ ಸುದ್ದಿ: FSSASI ಪರವಾನಗಿ ಇನ್ಮುಂದೆ ‘ಜೀವಿತಾವಧಿ’ ಮಾನ್ಯತೆ

    ISRO CE20 | ಇಸ್ರೋ ಸಾಧನೆ: ಮಹೇಂದ್ರಗಿರಿಯಲ್ಲಿ 22 ಟನ್ ಸಾಮರ್ಥ್ಯದ CE20 ಕ್ರಯೋಜೆನಿಕ್ ಇಂಜಿನ್ ಪರೀಕ್ಷೆ ಯಶಸ್ವಿ

    ಹರಿದ್ವಾರದ ಬಿಎಚ್‌ಇಎಲ್ ಘಟಕಕ್ಕೆ ಎಚ್.ಡಿ.ಕೆ ಭೇಟಿ: ನೌಕಾಸೇನೆಗೆ ಸುಧಾರಿತ ಗನ್ ಮೌಂಟ್ ಅರ್ಪಣೆ, ಸೌರಶಕ್ತಿ ಘಟಕ ಲೋಕಾರ್ಪಣೆ

    ರೈಲ್ವೇ ನಿಲ್ದಾಣದ ಪ್ರಾತಿನಿಧಿಕ ಚಿತ್ರ

    Indian Railway Logistics | ಭಾರತೀಯ ರೈಲ್ವೆ: ಸರಕು ಸಾಗಣೆ ದಕ್ಷತೆ ಹೆಚ್ಚಿಸಲು ಬಹು ಮದರಿಯ ಬೃಹತ್ ಕಾರ್ಯತಂತ್ರ ಜಾರಿ

    BW ANALYSYS | ಆಪರೇಷನ್ ಎಪಿಕ್ ಫ್ಯೂರಿ 2026: ಇರಾನ್ ಸಂಘರ್ಷದ ಜಾಗತಿಕ ಕಂಪನ ಮತ್ತು ಭಾರತದ ಮೇಲಾಗುವ ಗಂಭೀರ ಪರಿಣಾಮಗಳು

    LPG GAS SUPPLY | ಅಡುಗೆ ಅನಿಲ ಕೊರತೆ ಭೀತಿ ಬೇಡ: ಗೃಹ ಬಳಕೆಗೆ ತೊಂದರೆಯಿಲ್ಲ, ಮಿತಬಳಕೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ

  • Bengaluru Focus

    ಡಿ.ವಿ.ಜಿ. ಹಾಕಿಕೊಟ್ಟ ಮಾರ್ಗವೇ ಪತ್ರಕರ್ತರಿಗೆ ದಾರಿದೀಪ: ಕೆ.ಯು.ಡಬ್ಲ್ಯು.ಜೆ ಸಂಘದಿಂದ ಸಂಭ್ರಮದ ಆಚರಣೆ

    Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

    GBA Head Office Image

    ಜಿಬಿಎ ಹಾಗೂ ಪಾಲಿಕೆಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯಕ್ಕೆ ಆಗ್ರಹ: ಅಧಿಕಾರಿಗಳ ‘ಹಾಜರಾತಿ ವಂಚನೆ’ಗೆ ಇತಿಶ್ರೀ ಹಾಡಲು ಎನ್.ಆರ್. ರಮೇಶ್ ಒತ್ತಾಯ

    GBA News | ಹಲಸೂರು ಕೆರೆಗೆ ಕಾಯಕಲ್ಪ: 25 ವರ್ಷಗಳ ಹೂಳೆತ್ತಲು ಚಾಲನೆ, ಪ್ರವಾಸಿ ತಾಣವಾಗಿ ಅಭಿವೃದ್ಧಿ

    ರಾಜ್ಯದಲ್ಲಿ ಇಂಧನ ಕೊರತೆಯ ಭೀತಿ ಬೇಡ: ಪೆಟ್ರೋಲ್, ಡೀಸೆಲ್ ಪೂರೈಕೆ ಸುಗಮ – ಕರ್ನಾಟಕ ಪೆಟ್ರೋಲಿಯಮ್ ವ್ಯಾಪಾರಿಗಳ ಸಂಘಟನೆ ಸ್ಪಷ್ಟನೆ

    FSSASI News | ಆಹಾರ ಉದ್ಯಮಿಗಳಿಗೆ ಗ್ಯಾಸ್ ಕೊರತೆ ತಲೆಬಿಸಿ‌ ಮಧ್ಯೆ ಖುಷಿಯ ಸುದ್ದಿ: FSSASI ಪರವಾನಗಿ ಇನ್ಮುಂದೆ ‘ಜೀವಿತಾವಧಿ’ ಮಾನ್ಯತೆ

    BSWML News | ಬೆಂಗಳೂರಿನ ಹಸಿತ್ಯಾಜ್ಯಕ್ಕೆ ಜೈವಿಕ‌ ಅನಿಲ ಮದ್ದು; ಕೋರಮಂಗಲ ಘಟಕಕ್ಕೆ ಮುಖ್ಯ ಆಯುಕ್ತರ ಭೇಟಿ

    ಬಿಡಿಎ ಭರ್ಜರಿ ಕಾರ್ಯಾಚರಣೆ: ಮಲ್ಲತ್ತಹಳ್ಳಿಯಲ್ಲಿ 15 ಕೋಟಿ ರೂ. ಮೌಲ್ಯದ ಭೂಮಿ ವಶ

    GBA News | ಪರವಾನಿಗೆ ಇಲ್ಲದ 7 ಉದ್ದಿಮೆಗಳಿಗೆ ಬೀಗ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಖಡಕ್ ಕ್ರಮ

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home Bengaluru Focus

ಡಿ.ವಿ.ಜಿ. ಹಾಕಿಕೊಟ್ಟ ಮಾರ್ಗವೇ ಪತ್ರಕರ್ತರಿಗೆ ದಾರಿದೀಪ: ಕೆ.ಯು.ಡಬ್ಲ್ಯು.ಜೆ ಸಂಘದಿಂದ ಸಂಭ್ರಮದ ಆಚರಣೆ

ಪತ್ರಕರ್ತರ ಸಂಘಟನೆಯಲ್ಲಿ ಡಿ.ವಿ.ಗುಂಡಪ್ಪನವರ ದೂರದರ್ಶಿತ್ವ ಅನನ್ಯ: ಶಿವಾನಂದ ತಗಡೂರು ಶ್ಲಾಘನೆ

by Bengaluru Wire Desk
March 17, 2026
in Bengaluru Focus
Reading Time: 1 min read
0

ಬೆಂಗಳೂರು, ಮಾ.17 www.bengaluruwire.com: ಆಧುನಿಕ ಕನ್ನಡ ಸಾಹಿತ್ಯದ ಸರ್ವಜ್ಞ, ಸಾಹಿತ್ಯ ದಿಗ್ಗಜ ಡಿ.ವಿ.ಗುಂಡಪ್ಪನವರು ಕೇವಲ ಸಾಹಿತಿಯಷ್ಟೇ ಅಲ್ಲದೆ, ಪತ್ರಕರ್ತರ ಹಿತರಕ್ಷಣೆಗಾಗಿ 95 ವರ್ಷಗಳ ಹಿಂದೆಯೇ ಸಂಘಟನೆಯನ್ನು ಕಟ್ಟಿದ ದೂರದರ್ಶಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬಣ್ಣಿಸಿದರು.

ನಗರದಲ್ಲಿ ಬೆಂಗಳೂರು ಜಿಲ್ಲಾ ಘಟಕದ ನೂತನ ಕಚೇರಿ ಪೂಜೆ ಹಾಗೂ ಡಿ.ವಿ.ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂದು ಮೈಸೂರು ರಾಜ್ಯ ಪತ್ರಕರ್ತರ ಸಂಘ, ಇಂದು ಕೆ.ಯು.ಡಬ್ಲ್ಯು.ಜೆ:

ಡಿ.ವಿ.ಜಿ ಅವರು ಅಂದು ಹಾಕಿಕೊಟ್ಟ ಅಡಿಪಾಯದ ಮೇಲೆ ಇಂದು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ ಹೆಮ್ಮರವಾಗಿ ಬೆಳೆದಿದೆ. ಸುಮಾರು 10,000 ಸದಸ್ಯರನ್ನು ಹೊಂದಿರುವ ಇದು ದೇಶದ ಅತಿದೊಡ್ಡ ಸಂಘಟನೆಗಳಲ್ಲಿ ಒಂದಾಗಿದೆ. ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಸಮಿತಿಯ ಶಿಫಾರಸಿನ ಮೇರೆಗೆ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಸಂಘಕ್ಕೆ ಮರುನಾಮಕರಣ ಮಾಡಲಾದ ಇತಿಹಾಸವನ್ನು ತಗಡೂರು ಸ್ಮರಿಸಿದರು.

ಮಂಕುತಿಮ್ಮನ ಕಗ್ಗವೇ ಪತ್ರಕರ್ತರಿಗೆ ಸಂವಿಧಾನ:

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರಾಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, “ದೇಶಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಹೇಗೋ, ಪತ್ರಕರ್ತರು ಮತ್ತು ಸಾಮಾನ್ಯ ಜನರ ಬದುಕಿಗೆ ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ ಸಂವಿಧಾನದಂತಿದೆ. ಡಿ.ವಿ.ಜಿ ಅವರು ಎಷ್ಟೇ ಬಡತನವಿದ್ದರೂ ಸರ್ಕಾರದ ಚೆಕ್‌ಗಳನ್ನು ನಗದೀಕರಿಸದೆ ಸ್ವಾಭಿಮಾನಿಯಾಗಿ ಬದುಕಿದ ಆದರ್ಶ ವ್ಯಕ್ತಿತ್ವದವರು,” ಎಂದು ಕೊಂಡಾಡಿದರು.

ಬಹುಮುಖ ಪ್ರತಿಭೆಯ ಮೇರು ವ್ಯಕ್ತಿತ್ವ:

ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ ಸದಸ್ಯ ಕೆ.ಎಚ್. ಅಶ್ವತ್ಥನಾರಾಯಣ ಮಾತನಾಡಿ, ಡಿ.ವಿ.ಜಿ ಅವರು ಪ್ರೌಢಶಾಲೆವರೆಗೆ ಓದಿದ್ದರೂ, ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಅವರು ಹೊಂದಿದ್ದ ಪಾಂಡಿತ್ಯ ಅಪ್ರತಿಮವಾದುದು. ಅವರ “ಮಂಕುತಿಮ್ಮನ ಕಗ್ಗ” ಅಪ್ರತಿಮ ಕೃತಿಯು ಸಮಾಜದ ಪ್ರತಿಯೊಂದು ಸಮಸ್ಯೆಗೆ ಪರಿಹಾರ ನೀಡುವ ಶಕ್ತಿ ಹೊಂದಿವೆ ಎಂದರು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಮಾತನಾಡಿದ, ಹಿರಿಯ ಪತ್ರಕರ್ತ ಭೋಪಯ್ಯ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕರಾದ ಡಿ.ವಿ.ಗುಂಡಪ್ಪನವರ ಹುಟ್ಟುಹಬ್ಬದ ದಿನದಂದೇ ಬೆಂಗಳೂರು ಜಿಲ್ಲಾ ಘಟಕ ಇಂದಿನಿಂದಲೇ ತಮ್ಮ ಕಚೇರಿ ಪೂಜೆ ಮಾಡುವುದರೊಂದಿಗೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದೊಂದಿಗೆ ಕಾರ್ಯಾರಂಭ ಮಾಡಿದೆ. ಇದೊಂದು ಶುಭ ಸೂಚನೆ ಎಂದರು.

ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷರಾದ ಎಸ್.ಸೋಮಶೇಖರ ಗಾಂಧಿ ಸ್ವಾಗತ ಮಾಡಿದರು, ಬೆಂಗಳೂರು ನಗರ ಜಿಲ್ಲೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರವೀಶ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಹಾಗೂ ಬೆಂಗಳೂರು ನಗರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

Please login to join discussion

Like Us on Facebook

Follow Us on Twitter

Recent News

ಡಿ.ವಿ.ಜಿ. ಹಾಕಿಕೊಟ್ಟ ಮಾರ್ಗವೇ ಪತ್ರಕರ್ತರಿಗೆ ದಾರಿದೀಪ: ಕೆ.ಯು.ಡಬ್ಲ್ಯು.ಜೆ ಸಂಘದಿಂದ ಸಂಭ್ರಮದ ಆಚರಣೆ

March 17, 2026

Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

March 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಡಿ.ವಿ.ಜಿ. ಹಾಕಿಕೊಟ್ಟ ಮಾರ್ಗವೇ ಪತ್ರಕರ್ತರಿಗೆ ದಾರಿದೀಪ: ಕೆ.ಯು.ಡಬ್ಲ್ಯು.ಜೆ ಸಂಘದಿಂದ ಸಂಭ್ರಮದ ಆಚರಣೆ

March 17, 2026

Wildlife News | ಬನ್ನೇರುಘಟ್ಟಕ್ಕೆ ಬಂದರು ಹೊಸ ಅತಿಥಿಗಳು: ಉದ್ಯಾನವನದಲ್ಲಿ ಎರಡು ಜೀಬ್ರಾ ಮರಿಗಳ ಜನನ

March 17, 2026

ಸ್ಮಶಾನ ಭೂಮಿ ಕೊರತೆ: ಮಾರ್ಗಸೂಚಿ ದರಕ್ಕಿಂತ 3 ಪಟ್ಟು ಹಣ ನೀಡಿ ಜಮೀನು ಖರೀದಿಸಲು ಸರ್ಕಾರ ಸಿದ್ಧ

March 16, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d