Friday, May 9, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸಾಲಕ್ಕಾಗಿ ಪಾಲುದಾರ ರಾಷ್ಟ್ರಗಳ ಬಳಿ ಅಂಗಲಾಚುತ್ತಿರುವ ಪಾಕಿಸ್ತಾನ: ಅಜಿತ್ ದೋವಲ್ ವ್ಯಂಗ್ಯ!

    ಸಾವನ್ನಪ್ಪಿದ ಉಗ್ರರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ; ಪಾಕ್ ಕ್ರಮಕ್ಕೆ ಕೆರಳಿ ಕೆಂಡವಾದ ಭಾರತ

    ಸಿಬಿಐ ಮುಖ್ಯಸ್ಥ ಪ್ರವೀಣ್ ಸೂದ್ ಅಧಿಕಾರಾವಧಿ ಒಂದು ವರ್ಷ ವಿಸ್ತರಣೆ

    ‘ಆಪರೇಷನ್ ಸಿಂಧೂರ್’ ನಲ್ಲಿ ಧ್ವಂಸವಾದ 9 ಭಯೋತ್ಪಾದಕ ಶಿಬಿರಗಳ ಮ್ಯಾಪ್ ಸಹಿತ ಡಿಟೇಲ್ಸ್ ಇಲ್ಲಿದೆ

    OPERATION SINDOOR | ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ದಿಟ್ಟ ಕಾರ್ಯಾಚರಣೆ: ‘ಆಪರೇಷನ್ ಸಿಂಧೂರ್’

    ಒಳಮೀಸಲಾತಿ ವೈಜ್ಞಾನಿಕ ದತ್ತಾಂಶ ಸಂಗ್ರಹ ಕಾರ್ಯ ಇವತ್ತಿನಿಂದ ಪ್ರಾರಂಭ : ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಿಎಂ ಮನವಿ

    UN Security Council | ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆ ತಗ್ಗಿಸುವ ಕುರಿತು ತುರ್ತು ಸಭೆ

    ಡಿಆರ್‌ಡಿಒದಿಂದ ವಾಯುಮಂಡಲದ ಹಡಗಿನ ಯಶಸ್ವಿ ಹಾರಾಟ : ಭಾರತದ ಕಣ್ಗಾವಲು ಸಾಮರ್ಥ್ಯಕ್ಕೆ ಬಲ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅಧಿಸೂಚನೆಗೆ ಉತ್ತರ ಕರ್ನಾಟಕದ ಸಚಿವರ ಆಗ್ರಹ

  • Bengaluru Focus

    ಬೆಂಗಳೂರು ಮೆಟ್ರೋ: ಬೈಯಪ್ಪನಹಳ್ಳಿಯಲ್ಲಿ ನೂತನವಾಗಿ ಕ್ಯೂಆರ್ ಟಿಕೆಟ್ ಯಂತ್ರ ಸ್ಥಾಪನೆ

    “ಆಪರೇಷನ್ ಸಿಂಧೂರ” ಯಶಸ್ಸಿಗೆ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಆದೇಶ

    ಬಿಡಿಎ ಕಾರ್ಯಾಚರಣೆ – ನಂದಿನಿ ಬಡಾವಣೆಯಲ್ಲಿ 3.5 ಕೋಟಿ ರೂ. ಮೌಲ್ಯದ ಆಸ್ತಿ ವಶ

    ಬೆಂಗಳೂರು : ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟಕ್ಕೆ ಯತ್ನ : ಇಬ್ಬರ ಬಂಧನ

    BW SPECIAL | ಒಎಫ್‌ಸಿ ಅಳವಡಿಕೆಯಲ್ಲಿ ಬೆಸ್ಕಾಂ ಓವರ್‌ಟೇಕ್ : ಬಿಬಿಎಂಪಿಗೆ ಕೋಟ್ಯಾಂತರ ರೂ. ಆದಾಯ ನಷ್ಟದ ಭೀತಿ!!

    ನಗರದಲ್ಲಿ ಮಳೆಗಾಲದ ವೇಳೆ ಸದಾ ಸನ್ನದ್ಧರಾಗಿರಲು ಅಧಿಕಾರಿಗಳಿಗೆ ಸೂಚನೆ : ತುಷಾರ್ ಗಿರಿ ನಾಥ್

    ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಕರವೇ ಪೊಲೀಸ್ ದೂರು

    SSLC Result | ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಫಲಿತಾಂಶ ಪ್ರಕಟ : ವಿದ್ಯಾರ್ಥಿಗಳೇ ನಿಮ್ಮ ರಿಸಲ್ಟ್ ಹೀಗೆ ಚೆಕ್ ಮಾಡಿ

    ಬಿಡಿಎ ಬಡಾವಣೆ ಕುರಿತ ಗ್ರಾಫಿಕ್ಸ್ ಸಾಂದರ್ಭಿಕ ಚಿತ್ರ

    BW Special | BIG News | ಬಿಡಿಎ ವ್ಯಾಪ್ತಿಯ 1.22 ಲಕ್ಷ ಸ್ವತ್ತುದಾರರಿಗೆ ಬಿಗ್ ಶಾಕ್ : ಯದ್ವಾತದ್ವಾ ಆಸ್ತಿ ತೆರಿಗೆ ಹೆಚ್ಚಳ ; ನಿವಾಸಿಗಳಿಂದ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    ಸಾಲಕ್ಕಾಗಿ ಪಾಲುದಾರ ರಾಷ್ಟ್ರಗಳ ಬಳಿ ಅಂಗಲಾಚುತ್ತಿರುವ ಪಾಕಿಸ್ತಾನ: ಅಜಿತ್ ದೋವಲ್ ವ್ಯಂಗ್ಯ!

    ಸಾವನ್ನಪ್ಪಿದ ಉಗ್ರರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ; ಪಾಕ್ ಕ್ರಮಕ್ಕೆ ಕೆರಳಿ ಕೆಂಡವಾದ ಭಾರತ

    ಸಿಬಿಐ ಮುಖ್ಯಸ್ಥ ಪ್ರವೀಣ್ ಸೂದ್ ಅಧಿಕಾರಾವಧಿ ಒಂದು ವರ್ಷ ವಿಸ್ತರಣೆ

    ‘ಆಪರೇಷನ್ ಸಿಂಧೂರ್’ ನಲ್ಲಿ ಧ್ವಂಸವಾದ 9 ಭಯೋತ್ಪಾದಕ ಶಿಬಿರಗಳ ಮ್ಯಾಪ್ ಸಹಿತ ಡಿಟೇಲ್ಸ್ ಇಲ್ಲಿದೆ

    OPERATION SINDOOR | ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ದಿಟ್ಟ ಕಾರ್ಯಾಚರಣೆ: ‘ಆಪರೇಷನ್ ಸಿಂಧೂರ್’

    ಒಳಮೀಸಲಾತಿ ವೈಜ್ಞಾನಿಕ ದತ್ತಾಂಶ ಸಂಗ್ರಹ ಕಾರ್ಯ ಇವತ್ತಿನಿಂದ ಪ್ರಾರಂಭ : ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಿಎಂ ಮನವಿ

    UN Security Council | ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆ ತಗ್ಗಿಸುವ ಕುರಿತು ತುರ್ತು ಸಭೆ

    ಡಿಆರ್‌ಡಿಒದಿಂದ ವಾಯುಮಂಡಲದ ಹಡಗಿನ ಯಶಸ್ವಿ ಹಾರಾಟ : ಭಾರತದ ಕಣ್ಗಾವಲು ಸಾಮರ್ಥ್ಯಕ್ಕೆ ಬಲ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅಧಿಸೂಚನೆಗೆ ಉತ್ತರ ಕರ್ನಾಟಕದ ಸಚಿವರ ಆಗ್ರಹ

  • Bengaluru Focus

    ಬೆಂಗಳೂರು ಮೆಟ್ರೋ: ಬೈಯಪ್ಪನಹಳ್ಳಿಯಲ್ಲಿ ನೂತನವಾಗಿ ಕ್ಯೂಆರ್ ಟಿಕೆಟ್ ಯಂತ್ರ ಸ್ಥಾಪನೆ

    “ಆಪರೇಷನ್ ಸಿಂಧೂರ” ಯಶಸ್ಸಿಗೆ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಆದೇಶ

    ಬಿಡಿಎ ಕಾರ್ಯಾಚರಣೆ – ನಂದಿನಿ ಬಡಾವಣೆಯಲ್ಲಿ 3.5 ಕೋಟಿ ರೂ. ಮೌಲ್ಯದ ಆಸ್ತಿ ವಶ

    ಬೆಂಗಳೂರು : ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟಕ್ಕೆ ಯತ್ನ : ಇಬ್ಬರ ಬಂಧನ

    BW SPECIAL | ಒಎಫ್‌ಸಿ ಅಳವಡಿಕೆಯಲ್ಲಿ ಬೆಸ್ಕಾಂ ಓವರ್‌ಟೇಕ್ : ಬಿಬಿಎಂಪಿಗೆ ಕೋಟ್ಯಾಂತರ ರೂ. ಆದಾಯ ನಷ್ಟದ ಭೀತಿ!!

    ನಗರದಲ್ಲಿ ಮಳೆಗಾಲದ ವೇಳೆ ಸದಾ ಸನ್ನದ್ಧರಾಗಿರಲು ಅಧಿಕಾರಿಗಳಿಗೆ ಸೂಚನೆ : ತುಷಾರ್ ಗಿರಿ ನಾಥ್

    ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಕರವೇ ಪೊಲೀಸ್ ದೂರು

    SSLC Result | ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಫಲಿತಾಂಶ ಪ್ರಕಟ : ವಿದ್ಯಾರ್ಥಿಗಳೇ ನಿಮ್ಮ ರಿಸಲ್ಟ್ ಹೀಗೆ ಚೆಕ್ ಮಾಡಿ

    ಬಿಡಿಎ ಬಡಾವಣೆ ಕುರಿತ ಗ್ರಾಫಿಕ್ಸ್ ಸಾಂದರ್ಭಿಕ ಚಿತ್ರ

    BW Special | BIG News | ಬಿಡಿಎ ವ್ಯಾಪ್ತಿಯ 1.22 ಲಕ್ಷ ಸ್ವತ್ತುದಾರರಿಗೆ ಬಿಗ್ ಶಾಕ್ : ಯದ್ವಾತದ್ವಾ ಆಸ್ತಿ ತೆರಿಗೆ ಹೆಚ್ಚಳ ; ನಿವಾಸಿಗಳಿಂದ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home Bengaluru Focus

BW SPECIAL | Summer Demand For AC, Refrigerator | ಬೆಂಗಳೂರಿನಲ್ಲಿ ಬೇಸಿಗೆ ಬಿಸಿಗೆ ಸಾರ್ವಜನಿಕರು ತತ್ತರ : ಎಸಿ, ರೆಫ್ರಿಜರೇಟರ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್!!

ರಾಜಧಾನಿಯ ದಿನದ ಗರಿಷ್ಠ ಉಷ್ಣಾಂಶ 34-35 ಡಿಗ್ರಿಗಿಂತ ಹೆಚ್ಚಾಗಿದೆ | ಬಿಸಿಗಾಳಿ, ತಾಪಮಾನ ಏರಿಕೆಯಿಂದ ಪಾರಾಗಲು ಜನರು ಎಸಿ, ಕೂಲರ್, ರೆಫ್ರಿಜರೇಟರ್ ಖರೀದಿಗೆ ಹೆಚ್ಚು ಒಲವು ತೋರುತ್ತಿದ್ದಾರೆ | ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಎರಡು ಮೂರು ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ ಷೋರೂಮ್ ನವರು.

by Bengaluru Wire Desk
April 7, 2024
in Bengaluru Focus, BW Special, Public interest
Reading Time: 1 min read
0
ನಗರದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಎಸಿ ಮತ್ತು ಫ್ರಿಜ್ ಗೆ ಬೇಡಿಕೆ ಹೆಚ್ಚಾಗುತ್ತಿದೆ. (ಸಾಂದರ್ಭಿಕ ಚಿತ್ರ

ನಗರದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಎಸಿ ಮತ್ತು ಫ್ರಿಜ್ ಗೆ ಬೇಡಿಕೆ ಹೆಚ್ಚಾಗುತ್ತಿದೆ. (ಸಾಂದರ್ಭಿಕ ಚಿತ್ರ

ಬೆಂಗಳೂರು, ಏ.07 www.benglauruwire.com : ಬೆಂಗಳೂರು ಸೇರಿದಂತೆ ದೇಶಾದ್ಯಂತ ಬೇಸಿಗೆಯಲ್ಲಿ ಉಷ್ಣಾಂಶ ಒಂದೆಡೆ ಒಂದೇ ಸಮನೆ ಏರಿಕಾಯಾಗುತ್ತಿದ್ರೆ, ಇನ್ನೊಂದು ಕಡೆ ಹವಾನಿಯಂತ್ರಿತ ಉಪಕರಣ, ಕೂಲರ್, ಫ್ಯಾನ್ ಹಾಗೂ ರೆಫ್ರಿಜರೇಟರ್ ಗಳಿಗೆ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಗ್ರಾಹಕ ಉಪಕರಣಗಳ ಮಾರಾಟ ಮಳಿಗೆಗಳಲ್ಲಿ, ಆನ್ ಲೈನ್ ಖರೀದಿ ಮಾಡುವ ಗ್ರಾಹಕರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ.

ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಈ ಬಾರಿ ಫೆಬ್ರವರಿ ಮೂರನೇ ವಾರದಿಂದಲೇ ಉಷ್ಣಾಂಶ ಹೆಚ್ಚಾಗಿದ್ದು, ಬೇಸಿಗೆಯ ಬಿಸಿಯ ಅನುಭವ ಚಳಿಗಾಲದಲ್ಲೇ ಆರಂಭವಾದಂತಿತ್ತು. ಮಾರ್ಚ್ ನಲ್ಲಿ ಸುಡುಬಿಸಿಲಿನಲ್ಲಿ ನಗರದ ನಾಗರೀಕರು ಹೈರಾಣಾಗಿದ್ದರು. ಮನೆಯಿಂದ ಕಚೇರಿಗೆ ಟೂವೀಲರ್, ಕಾರ್, ಮೆಟ್ರೋ, ಬಸ್ ಮತ್ತಿತರ ವಾಹನಗಳಲ್ಲಿ ಹೋಗಿಬರುವವರು ಸುಸ್ತಾಗಿ ಹೋಗುತ್ತಿದ್ದಾರೆ. ಮನೆಗೆ ಬಂದರೂ ಬೆಳಗ್ಗೆಯಿಂದ ರಾತ್ರಿ ತನಕವೂ ಮೈಕೈ ಬಿಸಿಯಾಗುತ್ತಿದೆ. ಇದು ಏಪ್ರಿಲ್ ತಿಂಗಳಲ್ಲೂ ಇನ್ನೂ ಹೆಚ್ಚಾಗುತ್ತಾ ಬಂದಿದೆ.

ನಗರದಲ್ಲಿ ಏಪ್ರಿಲ್ 6 ರಿಂದ 7ನೇ ತಾರೀಖಿನ ಬೆಳಗ್ಗೆ 8.30ರ ಅವಧಿವರೆಗೆ ಬೆಂಗಳೂರಿನ ಗರಿಷ್ಠ ಉಷ್ಣಾಂಶ ನಗರದ ಬೇರೆ ಬೇರೆ ಕಡೆಗಳಲ್ಲಿ 36.8 ಡಿಗ್ರಿಯಿಂದ 41.3 ಡಿಗ್ರಿ ತನಕವಿತ್ತು. ಇನ್ನು ಕನಿಷ್ಠ ಉಷ್ಣಾಂಶವು 20.9 ಡಿಗ್ರಿಯಿಂದ 32.8 ಡಿಗ್ರಿವರೆಗೆ ಇದೆ. ಬೇಸಿಗೆ ಬಿಸಿಗಾಳಿ, ಉಷ್ಣಾಂಶ ಹೆಚ್ಚಳದಿಂದ ಜನರು ಕೂಲ್ ಆಗಿರಲು ತಂಪು ಪಾನೀಯ, ಐಸ್ ಕ್ರೀಮ್ ಮೊರೆ ಹೋಗುತ್ತಿದ್ದಾರೆ. ಇನ್ನೊಂದು ಕಡೆ ಶೋರೂಮ್ ಗಳಲ್ಲಿ, ಆನ್ ಲೈನ್ ಮೂಲಕ ಏರ್ ಕಂಡೀಷನರ್, ಕೂಲರ್ ಉಪಕರಣ, ಫ್ಯಾನ್ ಹಾಗೂ ರೆಫ್ರಿಜರೇಟರ್ ಖರೀದಿಗೆ ಹೆಚ್ಚು ಒಲವು ತೋರುತ್ತಿದ್ದಾರೆ.

ನಗರದ ಶೋರೂಮ್ ಮಾಲೀಕರೊಬ್ಬರ ಪ್ರಕಾರ, “ನಗರದಲ್ಲಿ ಎಸಿ, ಕೂಲರ್, ಫ್ಯಾನ್ ಗಳ ಮಾರಾಟವು ಕಳೆದ ಮೂರು ವರ್ಷಗಳಲ್ಲಿಯೇ ಹೆಚ್ಚಾಗಿದೆ. ಕಳೆದ ವರ್ಷ ಏಪ್ರಿಲ್ ಮೊದಲ ಎರಡು ವಾರಗಳ ನಂತರ ಬೇಸಿಗೆ ಬಿಸಿಯ ಅನುಭವ ಆಗುತ್ತಿತ್ತು. ಆದರೆ ಈ ಬಾರಿ ಫೆಬ್ರವರಿ ಮೂರನೇ ವಾರದಿಂದಲೇ ಎಸಿ, ಕೂಲರ್, ಫ್ಯಾನ್ ಹಾಗೂ ರೆಫ್ರಿಜರೇಟರ್ ಬೇಡಿಕೆ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಗ್ರಾಹಕರು ಹೆಚ್ಚಾಗುತ್ತಿದ್ದಾರೆ. ಬೇಡಿಕೆ 20-30 ಪ್ರತಿಶತ ಹೆಚ್ಚಾಗಿದೆ” ಎನ್ನುತ್ತಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣವು 33.9 ಡಿಗ್ರಿಯಿಂದ  44 ಡಿಗ್ರಿಯಷ್ಟು ಹೆಚ್ಚಾಗಿದೆ. ಕಳೆದ ವರ್ಷ ವಾಡಿಕೆಯ ಪ್ರಮಾಣದಷ್ಟು ಮಳೆಯಾಗಿಲ್ಲ. ಈ ಬಾರಿಯೂ ಮುಂಗಾರು ಪೂರ್ವ ಮಳೆಯಾಗದೆ ಎಲ್ಲೆಡೆ ಬರ ಕಾಣಿಸಿಕೊಂಡಿದೆ. ಬೆಂಗಳೂರಿನ 5 ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ನಗರದ ಹಲವು ಭಾಗಗಳಲ್ಲಿ ಬೋರ್ ವೆಲ್ ಗಳು ಬತ್ತಿ ಹೋಗಿವೆ. ದೇಹವನ್ನು ತಂಪಿಡಲು ಫ್ಯಾನ್, ಎಸಿ, ಕೂಲರ್, ರೆಫ್ರಿಜರೇಟರ್ ಬಳಕೆ ಹೆಚ್ಚಾಗಿರುವುದರಿಂದ ವಿದ್ಯುತ್ ಬಳಕೆಯ ಪ್ರಮಾಣವು ಏರಿಕೆಯಾಗಿದೆ.

ಇನ್ನೊಂದೆಡೆ ನಗರದ ಮತ್ತೊಂದು ಗ್ರಾಹಕ ಸರಕುಗಳನ್ನು ಮಾರಾಟ ಮಾಡುವ ಷೋರೂಮ್ ನವರು, “ಈ ಬಾರಿ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಗ್ರಾಹಕರು ಫ್ಯಾನ್, ಎಸಿ, ರೆಫ್ರಿಜರೇಟರ್ ಖರೀದಿಸಲು ಮುಗಿಬೀಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಇವುಗಳ ಬೇಡಿಕೆ ಮೂರುಪಟ್ಟು ಹೆಚ್ಚಾಗಿದೆ. ಕೆಲವೊಮ್ಮೆ ಗ್ರಾಹಕರು ಕೇಳಿದ ಉತ್ಪನ್ನವನ್ನು ಹೊಂದಿಸಲು ಕಷ್ಟವಾಗುತ್ತಿದೆ. ಸಾಮಾನ್ಯವಾಗಿ ನಗರದಲ್ಲಿ ಬೇಸಿಗೆ ಕಾಲದಲ್ಲಿ ಈ ಪ್ರಮಾಣದ ಬೇಡಿಕೆ ಕಂಡು ಬರುತ್ತಿರಲಿಲ್ಲ. ಆದರೆ ಈ ಬಾರಿ ಇವುಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

“ವಾತಾವರಣದಲ್ಲಿ ತೇವಾಂಶ ಸಂಪೂರ್ಣವಾಗಿ ಕಡಿಮೆಯಾಗಿದೆ. ಉಷ್ಣಾಂಶ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಮಧ್ಯಾಹ್ನದ ಹೊತ್ತಿರಲಿ, ಬೆಳಗ್ಗೆಯೇ ಮನೆಯಿಂದ ಹೊರಹೋಗಲು ಬಹಳ ಕಷ್ಟವಾಗುತ್ತದೆ. ಸೇಲ್ಸ್ ಮ್ಯಾನ್ ಆಗಿರುವುದರಿಂದ ಹೊರಗೆ ಹೋಗದೆ ವಿಧಿಯಿಲ್ಲ. ಮನೆಗೆ ಫ್ಯಾನ್ ಗಾಳಿ ಸಾಕಾಗುತ್ತಿಲ್ಲ ಎಂದು ಒಂದು ವಾರದ ಹಿಂದೆ ಕೂಲರ್ ಖರೀದಿಸಿ ತರಬೇಕಾಯಿತು” ಎಂದು ಹೇಳುತ್ತಾರೆ ಎನ್.ಆರ್.ಕಾಲೋನಿ ನಿವಾಸಿ ವೆಂಕಟೇಶ್.

ಬೆಂಗಳೂರು ಹವಾಮಾನ ಇಲಾಖೆಯ ವಿಜ್ಞಾನಿ ಎ ಪ್ರಸಾದ್ ಪ್ರಕಾರ, ಬೆಂಗಳೂರಿನಲ್ಲಿ ಮಾರ್ಚ್ ತಿಂಗಳ ಸಾಮಾನ್ಯ ಮಳೆ 14.1 ಮಿ.ಮೀ. “ಏಪ್ರಿಲ್‌ನಲ್ಲಿ ನಮ್ಮ ಮುನ್ಸೂಚನೆಗೆ ಸಂಬಂಧಿಸಿದಂತೆ, ನಾವು ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಮುನ್ಸೂಚನೆ ನೀಡಿದ್ದೇವೆ. ಕಳೆದ 10-15 ವರ್ಷಗಳಲ್ಲಿ, ಮಾರ್ಚ್‌ನಲ್ಲಿ ನಗರದಲ್ಲಿ ಮಳೆಯಿಲ್ಲದೆ ಎರಡು ರೀತಿಯ ನಿದರ್ಶನಗಳಿವೆ. ಏಪ್ರಿಲ್ 2 ರಂದು, ಸರಾಸರಿಯಾಗಿ 37.2 ಡಿಗ್ರಿಯಷ್ಟು ತಾಪಮಾನ ದಾಖಲಾಗಿತ್ತು. ಇದು ಕಳೆದ 15 ವರ್ಷಗಳಲ್ಲಿ ನಾಲ್ಕನೇ ಅತಿ ಹೆಚ್ಚಿನ ತಾಪಮಾನವಾಗಿದೆ. 2016 ರಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ 39.2 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.  ಏಪ್ರಿಲ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಸರಾಸರಿ ಮಳೆ 61.7 ಮಿ.ಮೀ ಆಗಿದ್ದರೆ, ಒಂದೇ ದಿನದಲ್ಲಿ ಮಳೆಯ ದಾಖಲೆ 108.6 ಮಿ.ಮೀ, 2001 ರಲ್ಲಿ ದಾಖಲಾಗಿತ್ತು. ಏಪ್ರಿಲ್ 2001 ರಲ್ಲಿ ಒಟ್ಟಾರೆಯಾಗಿ 323.8 ಮಿಮೀ ಮಳೆ ದಾಖಲಾಗಿತ್ತು.”

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...

Previous Post

#Skyshow | ನೆಹರು ಪ್ಲಾನಿಟೋರಿಯಂನಲ್ಲಿ ‘ಸ್ಕೈ ಶೋ’ ಪ್ರದರ್ಶನ ಏ.7ರಿಂದ ಆರಂಭ : ಬಾಹ್ಯಾಕಾಶ ಆಸಕ್ತರಿಗೆ ಅವಕಾಶ

Next Post

Ugadi Festival Water Supply | ಯುಗಾದಿ- ರಂಜಾನ್ ಹಬ್ಬಕ್ಕೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗದು : ಜಲಮಂಡಳಿ ಅಧ್ಯಕ್ಷ ಡಾ.ವಿ ರಾಮ್‌ ಪ್ರಸಾತ್‌ ಮನೋಹರ್‌

Next Post
ಬೆಂಗಳೂರಿನ ಸಾಂದರ್ಭಿಕ ಚಿತ್ರ

Ugadi Festival Water Supply | ಯುಗಾದಿ- ರಂಜಾನ್ ಹಬ್ಬಕ್ಕೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗದು : ಜಲಮಂಡಳಿ ಅಧ್ಯಕ್ಷ ಡಾ.ವಿ ರಾಮ್‌ ಪ್ರಸಾತ್‌ ಮನೋಹರ್‌

#UgadiFestival | ಕ್ರೋಧಿನಾಮ ಸಂವತ್ಸರದ ಫಲಾಫಲಗಳೇನು? ಬ್ರಹ್ಮ ಜಗತ್ತನ್ನು ಸೃಷ್ಟಿ ಮಾಡಿದ ದಿನವಿದು ; ಕಾಲಜ್ಞಾನದಲ್ಲಿ ಏನಿದೆ?

Please login to join discussion

Like Us on Facebook

Follow Us on Twitter

Recent News

ಸಾಲಕ್ಕಾಗಿ ಪಾಲುದಾರ ರಾಷ್ಟ್ರಗಳ ಬಳಿ ಅಂಗಲಾಚುತ್ತಿರುವ ಪಾಕಿಸ್ತಾನ: ಅಜಿತ್ ದೋವಲ್ ವ್ಯಂಗ್ಯ!

May 9, 2025

Operation Sindoor | ಭಾರತದ ಸಿಂಹ ಘರ್ಜನೆ: ಮೂರು ಸೇನೆಗಳಿಂದ ಪಾಕ್ ಮೇಲೆ ಆಕ್ರಮಣ!! ಕರಾಚಿ ಬಂದರು ಧ್ವಂಸ!!

May 9, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸಾಲಕ್ಕಾಗಿ ಪಾಲುದಾರ ರಾಷ್ಟ್ರಗಳ ಬಳಿ ಅಂಗಲಾಚುತ್ತಿರುವ ಪಾಕಿಸ್ತಾನ: ಅಜಿತ್ ದೋವಲ್ ವ್ಯಂಗ್ಯ!

May 9, 2025

Operation Sindoor | ಭಾರತದ ಸಿಂಹ ಘರ್ಜನೆ: ಮೂರು ಸೇನೆಗಳಿಂದ ಪಾಕ್ ಮೇಲೆ ಆಕ್ರಮಣ!! ಕರಾಚಿ ಬಂದರು ಧ್ವಂಸ!!

May 9, 2025

ಸಾವನ್ನಪ್ಪಿದ ಉಗ್ರರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ; ಪಾಕ್ ಕ್ರಮಕ್ಕೆ ಕೆರಳಿ ಕೆಂಡವಾದ ಭಾರತ

May 8, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d