Tuesday, May 20, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಎರಡು ವರ್ಷದಲ್ಲಿ 142 ಭರವಸೆಗಳನ್ನು ಪೂರೈಸಿದ್ದೇವೆ : ಸಿಎಂ ಸಿದ್ದರಾಮಯ್ಯ

    ಅಸ್ಸಾಂನಲ್ಲಿ ₹2,600 ಕೋಟಿ ಮೌಲ್ಯದ ಮಾದಕವಸ್ತು ವಶ, 20,000ಕ್ಕೂ ಹೆಚ್ಚು ಜನರ ಬಂಧನ : ಸಿಎಂ ಬಿಸ್ವಾ ಶರ್ಮಾ

    ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಸುರೇಶ್ ರೈನಾ ಮನವಿ

    Attention!! | ಕರ್ನಾಟಕದಲ್ಲಿ ಸ್ಥಿರಾಸ್ತಿ ನೋಂದಣಿಗೆ ಕಠಿಣ ನಿಯಮ; 30 ಲಕ್ಷ ರೂ. ಮೇಲ್ಪಟ್ಟ ಆಸ್ತಿ ಖರೀದಿ- ಮಾರಾಟಕ್ಕೆ ಈ ಎಲ್ಲಾ ಮಾಹಿತಿ ನೀಡಿಕೆ ಖಡ್ಡಾಯ!!

    ISRO 101st Mission | ಇಸ್ರೋ ಭಾನುವಾರ ತನ್ನ 101ನೇ ಉಪಗ್ರಹವನ್ನು ಉಡಾವಣೆ ಮಾಡಲಿದೆ: ಪಿಎಸ್‌ಎಲ್‌ವಿ-ಸಿ61 ವಿಶೇಷತೆಯೇನು?

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

    Video News | ಭಾರ್ಗವಾಸ್ತ್ರ: ಡ್ರೋನ್ ದಾಳಿಗಳನ್ನು ಸಮರ್ಥವಾಗಿ ಎದುರಿಸಿ ಧ್ವಂಸ ಮಾಡುವ ಪ್ರಯೋಗ ಯಶಸ್ವಿ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಬಿ-ಖಾತಾ ಅವಧಿ 3 ತಿಂಗಳವರೆಗೆ ವಿಸ್ತರಣೆ : ಜಿಪಿಎ, ಅಗ್ರೀಮೆಂಟ್ ದಾರರಿಗೂ ಬಿ-ಖಾತಾ ವಿತರಣೆಗೆ ಚಿಂತನೆ

    Court News | ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ.ಆರ್. ಗವಾಯಿ ಪ್ರಮಾಣವಚನ ಸ್ವೀಕಾರ

  • Bengaluru Focus

    ಬೆಂಗಳೂರಿನಲ್ಲಿ ನಿಲ್ಲದ ಮಳೆ ಆರ್ಭಟ, ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್!

    ಬೆಂಗಳೂರು ಮಳೆ ಅವಾಂತರ: ಸಿಎಂ, ಡಿಸಿಎಂ ನಗರಪ್ರದಕ್ಷಿಣೆ ಅಂತಿಮ ಕ್ಷಣದಲ್ಲಿ ರದ್ದು- ಬದಲಿಗೆ ಬಿಬಿಎಂಪಿ ಕಮಾಂಡ್ ಸೆಂಟರ್ ಗೆ ಭೇಟಿ

    CREATOR: gd-jpeg v1.0 (using IJG JPEG v80), default quality?

    ನ್ಯಾಯಮೂರ್ತಿ ನಾಡೋಜ ಎಸ್.ಆರ್. ನಾಯಕ್ ವಿಧಿವಶ

    ಬೆಂಗಳೂರು : ಮಳೆಯಿಂದ ಸಮಸ್ಯೆಯಾದ ಪ್ರದೇಶಗಳಿಗೆ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಭೇಟಿ, ಪರಿಶೀಲನೆ

    Attention!! | ಕರ್ನಾಟಕದಲ್ಲಿ ಸ್ಥಿರಾಸ್ತಿ ನೋಂದಣಿಗೆ ಕಠಿಣ ನಿಯಮ; 30 ಲಕ್ಷ ರೂ. ಮೇಲ್ಪಟ್ಟ ಆಸ್ತಿ ಖರೀದಿ- ಮಾರಾಟಕ್ಕೆ ಈ ಎಲ್ಲಾ ಮಾಹಿತಿ ನೀಡಿಕೆ ಖಡ್ಡಾಯ!!

    BIG NEWS | ಬಿಬಿಎಂಪಿ ಇಂದಿರಾ ಕ್ಯಾಂಟಿನ್ ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ : ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಅಮಾನತು

    ಬೆಂಗಳೂರು ಹಬ್ಬದ ಸಾಂದರ್ಭಿಕ ಚಿತ್ರ.

    ಉದ್ಯಾನ ನಗರಿಯಲ್ಲಿ “ಬೆಂಗಳೂರು ಹಬ್ಬ” ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಾಳೆ ವಿದ್ಯುಕ್ತ ಚಾಲನೆ

    ವಿಕಾಸಸೌಧದಲ್ಲಿ ಗುರುವಾರ ಸಂಜೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಕೌಶಲ್ಯ ಅಭಿವೃದ್ಧಿ ಕಾರ್ಯದರ್ಶಿ ಏಕ್ರೂಪ್ ಕೌರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಶಿಫಾರಸು ಆಧಾರಿತ ವರ್ಗಾವಣೆ ಇನ್ಮುಂದೆ ಬಂದ್‌

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    ಎರಡು ವರ್ಷದಲ್ಲಿ 142 ಭರವಸೆಗಳನ್ನು ಪೂರೈಸಿದ್ದೇವೆ : ಸಿಎಂ ಸಿದ್ದರಾಮಯ್ಯ

    ಅಸ್ಸಾಂನಲ್ಲಿ ₹2,600 ಕೋಟಿ ಮೌಲ್ಯದ ಮಾದಕವಸ್ತು ವಶ, 20,000ಕ್ಕೂ ಹೆಚ್ಚು ಜನರ ಬಂಧನ : ಸಿಎಂ ಬಿಸ್ವಾ ಶರ್ಮಾ

    ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಸುರೇಶ್ ರೈನಾ ಮನವಿ

    Attention!! | ಕರ್ನಾಟಕದಲ್ಲಿ ಸ್ಥಿರಾಸ್ತಿ ನೋಂದಣಿಗೆ ಕಠಿಣ ನಿಯಮ; 30 ಲಕ್ಷ ರೂ. ಮೇಲ್ಪಟ್ಟ ಆಸ್ತಿ ಖರೀದಿ- ಮಾರಾಟಕ್ಕೆ ಈ ಎಲ್ಲಾ ಮಾಹಿತಿ ನೀಡಿಕೆ ಖಡ್ಡಾಯ!!

    ISRO 101st Mission | ಇಸ್ರೋ ಭಾನುವಾರ ತನ್ನ 101ನೇ ಉಪಗ್ರಹವನ್ನು ಉಡಾವಣೆ ಮಾಡಲಿದೆ: ಪಿಎಸ್‌ಎಲ್‌ವಿ-ಸಿ61 ವಿಶೇಷತೆಯೇನು?

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

    Video News | ಭಾರ್ಗವಾಸ್ತ್ರ: ಡ್ರೋನ್ ದಾಳಿಗಳನ್ನು ಸಮರ್ಥವಾಗಿ ಎದುರಿಸಿ ಧ್ವಂಸ ಮಾಡುವ ಪ್ರಯೋಗ ಯಶಸ್ವಿ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಬಿ-ಖಾತಾ ಅವಧಿ 3 ತಿಂಗಳವರೆಗೆ ವಿಸ್ತರಣೆ : ಜಿಪಿಎ, ಅಗ್ರೀಮೆಂಟ್ ದಾರರಿಗೂ ಬಿ-ಖಾತಾ ವಿತರಣೆಗೆ ಚಿಂತನೆ

    Court News | ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ.ಆರ್. ಗವಾಯಿ ಪ್ರಮಾಣವಚನ ಸ್ವೀಕಾರ

  • Bengaluru Focus

    ಬೆಂಗಳೂರಿನಲ್ಲಿ ನಿಲ್ಲದ ಮಳೆ ಆರ್ಭಟ, ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್!

    ಬೆಂಗಳೂರು ಮಳೆ ಅವಾಂತರ: ಸಿಎಂ, ಡಿಸಿಎಂ ನಗರಪ್ರದಕ್ಷಿಣೆ ಅಂತಿಮ ಕ್ಷಣದಲ್ಲಿ ರದ್ದು- ಬದಲಿಗೆ ಬಿಬಿಎಂಪಿ ಕಮಾಂಡ್ ಸೆಂಟರ್ ಗೆ ಭೇಟಿ

    CREATOR: gd-jpeg v1.0 (using IJG JPEG v80), default quality?

    ನ್ಯಾಯಮೂರ್ತಿ ನಾಡೋಜ ಎಸ್.ಆರ್. ನಾಯಕ್ ವಿಧಿವಶ

    ಬೆಂಗಳೂರು : ಮಳೆಯಿಂದ ಸಮಸ್ಯೆಯಾದ ಪ್ರದೇಶಗಳಿಗೆ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಭೇಟಿ, ಪರಿಶೀಲನೆ

    Attention!! | ಕರ್ನಾಟಕದಲ್ಲಿ ಸ್ಥಿರಾಸ್ತಿ ನೋಂದಣಿಗೆ ಕಠಿಣ ನಿಯಮ; 30 ಲಕ್ಷ ರೂ. ಮೇಲ್ಪಟ್ಟ ಆಸ್ತಿ ಖರೀದಿ- ಮಾರಾಟಕ್ಕೆ ಈ ಎಲ್ಲಾ ಮಾಹಿತಿ ನೀಡಿಕೆ ಖಡ್ಡಾಯ!!

    BIG NEWS | ಬಿಬಿಎಂಪಿ ಇಂದಿರಾ ಕ್ಯಾಂಟಿನ್ ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ : ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಅಮಾನತು

    ಬೆಂಗಳೂರು ಹಬ್ಬದ ಸಾಂದರ್ಭಿಕ ಚಿತ್ರ.

    ಉದ್ಯಾನ ನಗರಿಯಲ್ಲಿ “ಬೆಂಗಳೂರು ಹಬ್ಬ” ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಾಳೆ ವಿದ್ಯುಕ್ತ ಚಾಲನೆ

    ವಿಕಾಸಸೌಧದಲ್ಲಿ ಗುರುವಾರ ಸಂಜೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಕೌಶಲ್ಯ ಅಭಿವೃದ್ಧಿ ಕಾರ್ಯದರ್ಶಿ ಏಕ್ರೂಪ್ ಕೌರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಶಿಫಾರಸು ಆಧಾರಿತ ವರ್ಗಾವಣೆ ಇನ್ಮುಂದೆ ಬಂದ್‌

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home News Wire

Identify Fake GST Registration Drive | ನಕಲಿ ಜಿಎಸ್ ಟಿ ನೋಂದಣಿ ವಿರುದ್ಧ ವಿಶೇಷ ಕಾರ್ಯಾಚರಣೆ : GST ಅಧಿಕಾರಿಗಳು ನಿಮ್ಮ ಸ್ಥಳಕ್ಕೆ ಬಂದಾಗ ನೀವೇನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

by Bengaluru Wire Desk
May 19, 2023
in News Wire, Public interest
Reading Time: 2 mins read
0
ಜಿಎಸ್ ಟಿ ತೆರಿಗೆ ಕುರಿತ ಗ್ರಾಫಿಕ್ಸ್ ಚಿತ್ರ (ಸಾಂದರ್ಭಿಕ ಚಿತ್ರ)

ಜಿಎಸ್ ಟಿ ತೆರಿಗೆ ಕುರಿತ ಗ್ರಾಫಿಕ್ಸ್ ಚಿತ್ರ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಮೇ.19 www.bengaluruwire.com : ದೇಶಾದ್ಯಂತ ನಕಲಿ ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿ ಹಾಗೂ ನಕಲಿ ಸರಕು ಪಟ್ಟಿ (Invoices) ನೀಡುತ್ತಿರುವವರ ವಿರುದ್ಧ ಮೇ.16 ರಿಂದ ಜುಲೈ 15ರ ತನಕ ಎರಡು ತಿಂಗಳುಗಳ ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿ (Central Board Of Indirect Taxes –CBIC) ವಿಶೇಷ ಕಾರ್ಯಾಚರಣೆ ಕಾರ್ಯಚರಣೆಯನ್ನು ಹಮ್ಮಿಕೊಂಡಿದೆ.

ದೇಶಾದ್ಯಂತ 1ನೇ ಜುಲೈ 2017ರಿಂದ ಜಿಎಸ್ ಟಿ ಜಾರಿಗೆ ಬಂದಾಗಿನಿಂದ 1.39 ಕೋಟಿ ವ್ಯಾಪಾರ ನಡೆಸಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ 2022-23ನೇ ವರ್ಷದಲ್ಲಿ ಜಿಎಸ್ ಟಿ ತೆರಿಗೆ ತಪ್ಪಿಸಿಕೊಳ್ಳುವಿಕೆಯ ಪ್ರಮಾಣ 1 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಾಗಿರುವ ಕಾರಣದಿಂದ ಜಿಎಸ್ ಟಿ ಕೌನ್ಸಿಲ್ ಸಭೆಯು ಈ ಸಮಸ್ಯೆಯನ್ನು ಚರ್ಚಿಸಿ ನಕಲಿ ಜಿಎಸ್ ಟಿ ನೋಂದಣಿ ಹಾಗೂ ಕಾನೂನು ಬಾಹಿರ ಇನ್ ವಾಯ್ಸ್ ಹಂಚಿಕೆಯನ್ನು ತಡೆಗಟ್ಟಲು ಎರಡು ತಿಂಗಳ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

ಜಿಎಸ್ ಟಿ ನೀತಿ ನಿರೂಪಣಾ ವಿಭಾಗವು ಮೇ ತಿಂಗಳ ಆರಂಭದಲ್ಲಿ ಕೇಂದ್ರೀಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರಿಗೆ ಪತ್ರ ಬರೆದು, ನಕಲಿ ಜಿಎಸ್ ಟಿ ನೋಂದಣಿ ಬಳಸಿಕೊಂಡು ಸರಕು ಮತ್ತು ಸೇವೆಗಳನ್ನು ನೀಡದೆ ಅನಧಿಕೃತ ಇನ್ ವಾಯ್ಸ್ ಮೂಲಕ ಇನ್ ಪುಟ್ ಕ್ರೆಡಿಟ್ (ITC) ಅನ್ನು ಬೇರೊಂದು ವ್ಯಕ್ತಿಗೆ ವರ್ಗಾಯಿಸಿ ಲಾಭ ಮಾಡಿಕೊಡಲಾಗುತ್ತಿರುವುದನ್ನು ಗಮನಕ್ಕೆ ತಂದಿತ್ತು. ಇದೊಂದು ಗಂಭೀರ ಪ್ರಕರಣವಾಗಿದ್ದು, ಜಿಎಸ್ ಟಿಯ ಐಟಿಸಿ ದುರ್ಬಳಕೆ, ನಕಲಿ ಜಿಎಸ್ ಟಿ ಹಾಗೂ ಬೋಗಸ್ ಇನ್ ವಾಯ್ಸ್ ಗಳ ನೀಡಿಕೆಯಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ನಷ್ಟವಾಗುವುದನ್ನು ಗಮನಕ್ಕೆ ತಂದಿತ್ತು. ಈ ಹಿನ್ನಲೆಯಲ್ಲಿ ಜಿಎಸ್ ಟಿ ದುರ್ಬಳಕೆ ತಡೆ ವಿರುದ್ಧ ಎರಡು ತಿಂಗಳ ಕಾಲ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ತೆರಿಗೆ ತಪ್ಪಿಸುವಿಕೆ ಕುರಿತ ಸಾಂದರ್ಭಿಕ ಚಿತ್ರ (ಕಾನೂನು ಪಾಲನೆ ನಮ್ಮೆಲ್ಲರ ಜವಾಬ್ದಾರಿ – ನಿಯಮದಂತೆ ತಪ್ಪದೇ ಸರ್ಕಾರಕ್ಕೆ ತೆರಿಗೆ ವಿವರ/ ತೆರಿಗೆ ಸಲ್ಲಿಕೆ ಮಾಡಿ)

ದೇಶದಲ್ಲಿ ನಕಲಿ ಜಿಎಸ್ ಟಿ ಬಳಕೆಯನ್ನು ತಡೆಗಟ್ಟಲು ಸರ್ಕಾರ ದತ್ತಾಂಶ ವಿಶ್ಲೇಷಣೆ ಹಾಗೂ ಕೃತಕ ಬುದ್ದಿಮತ್ತೆ (Artificial Intelligence- AI) ವ್ಯವಸ್ಥೆಯ ಮೂಲಕ ಅಪಾಯಕಾರಿ ತೆರಿಗೆದಾರರ ಮಾಹಿತಿಯನ್ನು ಕಾನೂನು ಪಾಲನೆ ಮಾಡುವ ಇಲಾಖೆಗಳಿಗೆ ಮಾಹಿತಿ ರವಾನಿಸಿ ತೆರಿಗೆ ತಪ್ಪಿಸುವಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದೆ. ಇದಲ್ಲದೆ ಹೊಸದಾಗಿ ಜಿಎಸ್ ಟಿ ನೋಂದಣಿ ಮಾಡುವವರಿಗೆ ಆಧಾರ್ ಆಧಾರಿತ ಖಚಿತಪಡಿಸುವಿಕೆಯನ್ನು ಖಡ್ಡಾಯಗೊಳಿಸಲಾಗಿದೆ. ಜೊತೆಗೆ ಸೂಕ್ತ ಕಾಲಾವಧಿಯಲ್ಲಿ ಜಿಎಸ್ ಟಿ ವಿವರ ಸಲ್ಲಿಕೆ ಮಾಡದ ಜಿಎಸ್ ಟಿ ನೋಂದಣಿಯನ್ನು ಅಮಾನತು ಮಾಡುವ ಕಾರ್ಯವನ್ನು ಮಾಡುತ್ತಿದೆ. ಈ ಪ್ರಕ್ರಿಯೆಗಳು ನಕಲಿ ಜಿಎಸ್ ಟಿ ನೋಂದಣಿ ತಪ್ಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.

2020-21ರಲ್ಲಿ 12,596 ಪ್ರಕರಣ, 2021-22ರಲ್ಲಿ 12,574 ಹಾಗೂ 2022-23ನೇ ಸಾಲಿನಲ್ಲಿ ಒಟ್ಟು 14,000 ಜಿಎಸ್ ಟಿ ತೆರಿಗೆ ತಪ್ಪಿಸುವಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2022-23ನೇ ಸಾಲಿನಲ್ಲಿ ತೆರಿಗೆ ತಪ್ಪಿಸುವಿಕೆಯನ್ನು ಪತ್ತೆಹಚ್ಚುವಿಕೆಯ ಪ್ರಮಾಣ ದುಪ್ಪಟ್ಟು ಆಗಿ 1.01 ಲಕ್ಷ ಕೋಟಿ ರೂ.ನಷ್ಟು ಇರುವುದನ್ನು ಕಂಡು ಹಿಡಿದಿದೆ. ಈ ಪೈಕಿ 2022-23ನೇ ಸಾಲಿನಲ್ಲಿ ಜಿಎಸ್ ಟಿ ಗುಪ್ತಚರ ಮಹಾ ನಿರ್ದೇಶನಾಲಯದ (DGGI) ಅಧಿಕಾರಿಗಳು 21,000 ಕೋಟಿ ರೂ. ತೆರಿಗೆ ಹಣವನ್ನು ಮರಳಿ ಪಡೆದಿದೆ.

“ಜಿಎಸ್ ಟಿ ನೋಂದಣಿ ಕುರಿತು ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ನಡೆಸುವುದು ಕೇವಲ ಪರಿಶೀಲನೆ ಪ್ರಕ್ರಿಯೆಯಾಗಿದೆ ಮತ್ತು ತಪಾಸಣೆ ಪ್ರಕ್ರಿಯೆಯಲ್ಲ. ಆದ್ದರಿಂದ ನಿಜವಾದ GSTN ನೋಂದಣಿ ಮಾಡಿದವರು ಭಯಪಡುವ ಅಗತ್ಯವಿಲ್ಲ. ಇದು ನಕಲಿ ಜಿಎಸ್ ಟಿ ನೋಂದಣಿಯನ್ನು ಗುರುತಿಸಲು ಮಾತ್ರ. ನಿಯಮಿತ ವ್ಯವಹಾರವನ್ನು ಮಾಡದೆ ಐಟಿಸಿ ಪಾಸ್ ಆಗುತ್ತಿದ್ದು, ಈ ನಕಲಿ ಇನ್ ಪುಟ್ ಕ್ರೆಡಿಟ್ ನಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ. ಜಿಎಸ್ ಟಿ ಅಧಿಕಾರಿಯು ತಮ್ಮ ವ್ಯಾಪಾರ ಆವರಣಕ್ಕೆ ಅಥವಾ ತೆರಿಗೆದಾರರು ಜಿಎಸ್ ಟಿ ನೋಂದಣಿಯನ್ನು ತೆಗೆದುಕೊಂಡಿರುವ ವಿಳಾಸಕ್ಕೆ ಭೇಟಿ ನೀಡಿದರೆ ಈ ವಿಶೇಷ ಕಾರ್ಯಾಚರಣೆಯ ಅಡಿಯಲ್ಲಿ ಅವರು ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಿ” ಎಂದು ಕರ್ನಾಟಕ ತೆರಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜಫ್ರುಲ್ಲಾ ಸತ್ತಾರ್ ಖಾನ್ ಜಿಎಸ್ ಟಿ ನೋಂದಣಿದಾರರಿಗೆ ಮಾಹಿತಿ ನೀಡಿದ್ದಾರೆ.

ಈ ಕೆಳಗೆ ತಿಳಿಸಿದ ದಾಖಲೆಗಳು ನಿಮ್ಮ ಬಳಿಯಿಟ್ಟುಕೊಂಡಿರಿ :

1. ತೆರಿಗೆದಾರರು ತಮ್ಮ ವ್ಯಾಪಾರದ ಆವರಣದಲ್ಲಿ GSTN ಅನ್ನು ಪ್ರದರ್ಶಿಸುವ ಅಗತ್ಯವಿದೆ.

2. ತೆರಿಗೆದಾರರು ತಮ್ಮ ಬಾಡಿಗೆ ಒಪ್ಪಂದದ ಅವಧಿ ಮುಗಿದಿದ್ದರೆ ಅದನ್ನು ನವೀಕರಿಸಬೇಕು ಮತ್ತು GST ನೋಂದಣಿ ಸಮಯದಲ್ಲಿ ಸಲ್ಲಿಸಿದ ಎಲ್ಲಾ ಪೂರಕ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ.

3. ಪಾಲುದಾರಿಕೆಯಲ್ಲಿ ನೋಂದಾಯಿಸಿದ್ದರೆ ತೆರಿಗೆದಾರರು ತಮ್ಮ ಪಾಲುದಾರ/ನಿರ್ದೇಶಕರ ಕೆವೈಸಿ (KYC) ಅನ್ನು ಸಂಗ್ರಹಿಸಬೇಕಾಗುತ್ತದೆ.

4. ವ್ಯಾಪಾರ ಆವರಣದ ತಿದ್ದುಪಡಿ ಅಥವಾ ಒಪ್ಪಂದವನ್ನು ನವೀಕರಿಸಿದರೆ ತೆರಿಗೆದಾರರು NOC ಅಥವಾ ಮಾಲೀಕತ್ವದ ಪುರಾವೆಗಳನ್ನು ಸಂಗ್ರಹಿಸಬೇಕು. ಆವರಣಕ್ಕೆ ಬೆಂಬಲವಾಗಿ ಅವರ ವಿದ್ಯುತ್ ಬಿಲ್‌ಗಳು ಇತ್ಯಾದಿಗಳನ್ನು ಪರಿಶೀಲಿಸಬಹುದು.

5. ತೆರಿಗೆದಾರರು ತಮ್ಮ ಜಿಎಸ್‌ಟಿ ನೋಂದಣಿ ಪ್ರಮಾಣಪತ್ರದಲ್ಲಿ ತಮ್ಮ ಜಿಎಸ್‌ಟಿಎನ್‌ನೊಂದಿಗೆ ತಮ್ಮ ನಿಖರವಾದ ವ್ಯಾಪಾರದ ಹೆಸರನ್ನು ಪ್ರದರ್ಶಿಸಬೇಕು.

6. ತೆರಿಗೆದಾರರು ಅವರು ಸರಕುಗಳನ್ನು ಖರೀದಿಸುತ್ತಿರುವ ತಮ್ಮ ಪೂರೈಕೆದಾರರ ವಿವರಗಳನ್ನು ಮತ್ತು ಇನ್‌ವಾಯ್ಸ್ ಪ್ರಕಾರ ಪಾವತಿ ಟ್ರ್ಯಾಕ್ ಅನ್ನು ಜಿಎಸ್ ಟಿ ಅಧಿಕಾರಿಗಳು ಪರಿಶೀಲಿಸುವ ಸಾಧ್ಯತೆಯಿದೆ.

7. ಜಿಎಸ್ ಟಿ ನೋಂದಣಿದಾರರು ನಿಜವಾದ ಪೂರೈಕೆದಾರರಿಂದ ಸರಕುಗಳನ್ನು ಖರೀದಿಸುತ್ತಿದ್ದಾರೆ ಎಂದು ರುಜುವಾತುಪಡಿಸುವ ದಾಖಲೆಗಳಿಟ್ಟುಕೊಂಡಿರಬೇಕು.

8. ತೆರಿಗೆದಾರರು ಜಿಎಸ್ ಟಿ ಕಾಯಿದೆಯು ಸೂಚಿಸಿದಂತೆ ಎಲ್ಲಾ ಖಾತೆಯ ಪುಸ್ತಕಗಳನ್ನು ನಿರ್ವಹಿಸಬೇಕಾಗುತ್ತದೆ ಮತ್ತು ಒಳಗಿನ ಸರಬರಾಜು (ಖರೀದಿಗಳು) ಹೊರಗಿನ ಸರಬರಾಜುಗಳು (ಮಾರಾಟ) ಇತ್ಯಾದಿಗಳ ವಿವರಗಳನ್ನು ನಿರ್ವಹಿಸುವ ಮೂಲಕ ಎಲ್ಲಾ ಅನುಸರಣೆಯನ್ನು ಅನುಸರಿಸಬೇಕಾಗುತ್ತದೆ.

9. ತೆರಿಗೆದಾರರು ತಮ್ಮ ಸರಕು ಮತ್ತು ಸೇವೆಗಳ ಪೂರೈಕೆದಾರರ ಸ್ಥಿತಿಯನ್ನು ಪರಿಶೀಲಿಸುವ ಮೂಲಕ ಎಲ್ಲಾ ಜಿಎಸ್ ಟಿ ಅನುಸರಣೆಗಳನ್ನು ಪರಿಶೀಲಿಸಬೇಕು ಮತ್ತು GSTR-1 ಮತ್ತು GSTR-3B ಇತ್ಯಾದಿಗಳನ್ನು ನಿಗದಿತ ದಿನಾಂಕಗಳೊಳಗೆ ಭರ್ತಿ ಮಾಡಬೇಕಾಗುತ್ತದೆ.

10. ಜಿಎಸ್‌ಟಿ ಅಧಿಕಾರಿಗಳು ಪರಿಶೀಲನೆಗಾಗಿ ತಮ್ಮ ವ್ಯಾಪಾರದ ಆವರಣಕ್ಕೆ ಭೇಟಿ ನೀಡಿದರೆ ತೆರಿಗೆದಾರರು ತಮ್ಮ ವ್ಯಾಪಾರದ ಆವರಣದಲ್ಲಿ ತಪ್ಪದೆ ಹಾಜರಿರಬೇಕು. ಇಲ್ಲದಿದ್ದಲ್ಲಿ ತೆರಿಗೆದಾರರಿಗೆ ಜಿಎಸ್ ಟಿ ಕಚೇರಿಯಿಂದ ಸೂಕ್ತ ರೀತಿಯಲ್ಲಿ ಸೂಚನೆ ಪಾಲಿಸಲಿಲ್ಲ ಎಂದು ಅವರ ಹೆಸರಿನಲ್ಲಿ ಅನಗತ್ಯ ನೋಟಿಸ್‌ಗಳನ್ನು ಬರುವ ಸಾಧ್ಯತೆಗಳಿರುತ್ತದೆ.

ಜಿಎಸ್ ಟಿ ಇಲಾಖೆಯ ಸೂಚನೆ ಪಾಲಿಸದಿದ್ದರೆ ಅದರ ಪರಿಣಾಮವೇನಾಗುತ್ತದೆ? :

1.  ಸಿಜಿಎಸ್ ಟಿ (CGST) ಮತ್ತು ಎಸ್ ಜಿಎಸ್ ಟಿ ( SGST) ಕಾಯಿದೆಯ ಪ್ರಕಾರ ದಂಡ ವಿಧಿಸಬಹುದು.

2. ಜಿಎಸ್ ಟಿ ನೋಂದಣಿಯನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಬಹುದು.

3. ಇನ್‌ಪುಟ್ ತೆರಿಗೆಯನ್ನು ನಿರ್ಬಂಧಿಸುವುದು.

4. ಯಾವುದೇ ನಕಲಿ ಜಿಎಸ್ ಟಿ ಇನ್‌ವಾಯ್ಸ್‌ನಿಂದ ಪಡೆದ ಇನ್‌ಪುಟ್ ತೆರಿಗೆ ಕ್ರೆಡಿಟ್‌ನ ಮರು ಪಾವತಿಸಿಕೊಳ್ಳಬಹುದು.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...

Previous Post

BDA Villa Project | ಬಿಡಿಎ ನಿರ್ಮಾಣದ ಅತ್ಯಾಧುನಿಕ “ವಿಲ್ಲಾ” ಕಾಮಗಾರಿ ಅಂತಿಮ ಹಂತದಲ್ಲಿ : ಶೀಘ್ರದಲ್ಲೇ ಸಾರ್ವಜನಿಕರಿಗೆ ಹಂಚಿಕೆ

Next Post

RBI Withdraws 2000 Rs. Currency Notes| 2,000 ರೂ. ಮುಖಬೆಲೆಯ ನೋಟು ಚಲಾವಣೆಯಿಂದ ಹಿಂಪಡೆಯಲು ಆರ್ ಬಿಐ ನಿರ್ಧಾರ

Next Post

RBI Withdraws 2000 Rs. Currency Notes| 2,000 ರೂ. ಮುಖಬೆಲೆಯ ನೋಟು ಚಲಾವಣೆಯಿಂದ ಹಿಂಪಡೆಯಲು ಆರ್ ಬಿಐ ನಿರ್ಧಾರ

ವಿಧಾನಸೌಧದ ಸಾಂದರ್ಭಿಕ ಚಿತ್ರ

Karnataka Congress Government | ನೂತನ ಸಿಎಂ,‌ ಡಿಸಿಎಂ‌ ಹುದ್ದೆಗೆ ಇಂದು ಪ್ರಮಾಣವಚನ ಸ್ವೀಕಾರ ; ಸಿದ್ದು - ಡಿಕೆಶಿ ಜೊತೆಗೆ 8 ಮಂದಿ ಸಂಪುಟ ಸೇರ್ಪಡೆ

Please login to join discussion

Like Us on Facebook

Follow Us on Twitter

Recent News

ಎರಡು ವರ್ಷದಲ್ಲಿ 142 ಭರವಸೆಗಳನ್ನು ಪೂರೈಸಿದ್ದೇವೆ : ಸಿಎಂ ಸಿದ್ದರಾಮಯ್ಯ

May 20, 2025

ಅಸ್ಸಾಂನಲ್ಲಿ ₹2,600 ಕೋಟಿ ಮೌಲ್ಯದ ಮಾದಕವಸ್ತು ವಶ, 20,000ಕ್ಕೂ ಹೆಚ್ಚು ಜನರ ಬಂಧನ : ಸಿಎಂ ಬಿಸ್ವಾ ಶರ್ಮಾ

May 20, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಎರಡು ವರ್ಷದಲ್ಲಿ 142 ಭರವಸೆಗಳನ್ನು ಪೂರೈಸಿದ್ದೇವೆ : ಸಿಎಂ ಸಿದ್ದರಾಮಯ್ಯ

May 20, 2025

ಅಸ್ಸಾಂನಲ್ಲಿ ₹2,600 ಕೋಟಿ ಮೌಲ್ಯದ ಮಾದಕವಸ್ತು ವಶ, 20,000ಕ್ಕೂ ಹೆಚ್ಚು ಜನರ ಬಂಧನ : ಸಿಎಂ ಬಿಸ್ವಾ ಶರ್ಮಾ

May 20, 2025

ಬೆಂಗಳೂರಿನಲ್ಲಿ ನಿಲ್ಲದ ಮಳೆ ಆರ್ಭಟ, ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್!

May 20, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d