Wednesday, June 11, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮುಂದೂಡಿಕೆ: ತಾಂತ್ರಿಕ ದೋಷವೇ ಕಾರಣ

    DCM DK Shivakumar

    ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

    ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

  • Bengaluru Focus

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮುಂದೂಡಿಕೆ: ತಾಂತ್ರಿಕ ದೋಷವೇ ಕಾರಣ

    DCM DK Shivakumar

    ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

    ಪ್ರಧಾನಿ ನರೇಂದ್ರ ಮೋದಿಯವರ ಸಾಂದರ್ಭಿಕ ಚಿತ್ರ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಂಭ್ರಮ: ಅಭಿವೃದ್ಧಿ ಪಥದಲ್ಲಿ ಭಾರತ

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

  • Bengaluru Focus

    ಹಸಿರು ಕ್ರಾಂತಿಗೆ ಬಮೂಲ್‌ನ ಪರಿಸರಸ್ನೇಹಿ ಹೆಜ್ಜೆ: ಆರು ತಿಂಗಳಲ್ಲಿ ಕರಗುವ ಹಾಲಿನ ಕವರ್‌ಗಳ ಬಳಕೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home BW Special

BW EXCLUSIVE | #JaljeevanMission | ನಲ್ಲಿಯಿದೆ ನೀರಿಲ್ಲ ; ‘ಮನೆ ಮನೆಗೆ ಬಾರದ ಗಂಗೆ’ – ರಾಜ್ಯದ ಜಲಜೀವನ್ ದುಸ್ಥಿತಿ

ರಾಜ್ಯದ ಗ್ರಾಮೀಣ ಭಾಗದಲ್ಲಿ 6,515.93 ಕೋಟಿ ಕರ್ಚು ಮಾಡಿದ್ದರೂ ಒಟ್ಟು 28,335 ಹಳ್ಳಿಗಳ ಪೈಕಿ 1.01 ಕೋಟಿ ಮನೆಗಳ ಪೈಕಿ 58.06 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ

by Bengaluru Wire Desk
October 31, 2022
in BW Special, News Wire, Public interest
Reading Time: 2 mins read
0

ಬೆಂಗಳೂರು, ಅ.31 www.bengaluruwire.com : ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೆ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವ ಯೋಜನೆ ಜಲಜೀವನ್ ಮಿಷನ್ ಅನುಷ್ಟಾನದಲ್ಲಿ ಕರ್ನಾಟಕ ಕಳಪೆ ಸಾಧನೆ ಮಾಡಿದೆ.

ಇತ್ತೀಚಿನ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು 28,335 ಹಳ್ಳಿಗಳ ಪೈಕಿ ಕೇವಲ 4,106 ಹಳ್ಳಿಗಳಲ್ಲಿ ಮಾತ್ರ ಶೇ.100ಕ್ಕೆ 100ರಷ್ಟು ಪ್ರತಿ ಮನೆಗೆ ಕ್ರಿಯಾತ್ಮಕ ಮನೆಯ ಟ್ಯಾಪ್ ಸಂಪರ್ಕಗಳ (FHTC)ನ್ನು ಹಾಕಲಾಗಿದೆ. 2019ರಲ್ಲಿ ಜಾರಿಗೆ ಬಂದ ಕೇಂದ್ರದ ಜಲಜೀವನ್ ಮಿಷನ್ ಯೋಜನೆಯನ್ನು ರಾಜ್ಯದಲ್ಲಿ ‘ಮನೆ ಮನೆಗೆ ಗಂಗೆ’ ಯೋಜನೆ ಎಂದು ಹೆಸರಿಡಲಾಗಿದೆ. ಈ ಯೋಜನೆಗೆ 2019-20 ರಿಂದ 6,515.93 ಕೋಟಿ ಕರ್ಚು ಮಾಡಿದ್ದರೂ ಹಲವು ಹಳ್ಳಿಗಳಲ್ಲಿ ಟ್ಯಾಪ್ ಹಾಕಿದ್ದರೂ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳೇ ಹೆಚ್ಚು.

ಈ ಕುರಿತಂತೆ ಗ್ರಾಮಗಳಲ್ಲಿನ ವಾಸ್ತವ ಪರಿಸ್ಥಿತಿ ಬಗ್ಗೆ “ಬೆಂಗಳೂರು ವೈರ್” ಪರಿಶೀಲಿಸಿದಾಗ, ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು, ಕುಡುಮಲ್ಲಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಹುಗಲವಳ್ಳಿ ಹಳ್ಳಿಯಲ್ಲಿ ಕೇಂದ್ರದ ಜಲಜೀವನ್ ಮಿಷನ್ ಯೋಜನೆಯಡಿ ಹಲವು ಮನೆಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಟ್ಯಾಪ್ ಹಾಕಿ 9 ತಿಂಗಳಾದರೂ ನೀರಿನ ಸಂಪರ್ಕ ಬಂದಿಲ್ಲ.

ನಲ್ಲಿ ಹಾಕಿ ಫೊಟೊ ಹೊಡೆದು ಹೋದರು ನೀರು ಕೊಟ್ಟಿಲ್ಲ :
“ಹುಗಲವಳ್ಳಿ ಹಳ್ಳಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಿದೆ. ಹಾಗಾಗಿ ಕುಡುಮಲ್ಲಿಗೆ ಗ್ರಾಮಪಂಚಾಯ್ತಿಗೆ ಕುಡಿಯುವ ನೀರಿನ ಪೂರೈಸುವಂತೆ ಮನವಿ ಮಾಡಿದ್ದೆವು. ಅದರಂತೆ 7-8 ಮನೆಗಳಿಗೆ ನೀರಿನ ಪೈಪ್, ನಲ್ಲಿ ಹಾಕಿ ಫೊಟೊ ಹೊಡೆದುಕೊಂಡು ಹೋದರು. ಅಲ್ಲಿಂದ 10 ತಿಂಗಳಾದರು ಈತನಕ ಈ ನಲ್ಲಿಯಲ್ಲಿ‌ ನೀರು ಬಂದಿಲ್ಲ. ಸುತ್ತ ಹಳ್ಳಿಗಳಲ್ಲಿ ಬೋರ್ ಕೊರೆದು ಮಿಷನ್ ಹಾಕಿ ನೀರು ಕೊಡುತ್ತಾರೆ. ಆ ಬೊರ್ ವಲ್ ಆಗಾಗ ಕೆಟ್ಟು ಹೋಗಿ ಸಮಸ್ಯೆಯಾಗುತ್ತದೆ. ಶಾಶ್ವತ ನೀರು ಪೂರೈಕೆಗೆ ಮನೆಯಿಂದ 1 ಕಿ.ಮೀ ದೂರದಲ್ಲಿ ತುಂಗ ನದಿಯಿದ್ದರೂ ಗ್ರಾ.ಪಂ ಯೋಜನೆ ಹೆಸರಲ್ಲಿ ದುಡ್ಡು ಮಾಡುತ್ತಿದೆ. 12 ವರ್ಷಗಳಿಂದ ನಮ್ಮ ರಸ್ತೆಗೆ ಟಾರ್ ಹಾಕಿಲ್ಲ. ಈ ಸಮಸ್ಯೆಯನ್ನು ಸರ್ಕಾರ ಶೀಘ್ರದಲ್ಲೆ ಪರಿಹರಿಸಬೇಕಿದೆ”.

– ಎಚ್.ಬಿ.ಮಂಜುನಾಥ್ ಭಟ್, ಸ್ಥಳೀಯರು, ಹುಗಲವಳ್ಳಿ (ಶಿವಮೊಗ್ಗ ಜಿಲ್ಲೆ)
ಹುಗಲವಳ್ಳಿಯ ರಸ್ತೆಗೆ ಡಾಂಬರು ಕಾಣದೆ ಹಲವು ವರ್ಷಗಳೇ ಸಂದಿವೆ.

ನೀರು ಪೂರೈಕೆ – ನೈರ್ಮಲ್ಯತೆ ಬಗ್ಗೆ ಸಹಾಯವಾಣಿಗೆ ನಿತ್ಯ ದೂರು :
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD)ಯ ಸಹಾಯವಾಣಿ ಕೇಂದ್ರದಲ್ಲಿ ಪ್ರತಿದಿನ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಸಂಪರ್ಕದಲ್ಲಿ ದೋಷ, ನೈರ್ಮಲ್ಯತೆಯ ಸಮಸ್ಯೆ ಹೀಗೆ ನಾನಾ ಸಮಸ್ಯೆಗಳ ಬಗ್ಗೆ ದಿನನಿತ್ಯ 25-30 ದೂರುಗಳು ದಾಖಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇದನ್ನೇ ಸೂಕ್ಷ್ಮವಾಗಿ ಗಮನಿಸಿದರೆ, ಶೇ.100ರಷ್ಟು ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ ಎಂದು ಪ್ರಾಮಾಣಿಕೃತಗೊಂಡ ಹಳ್ಳಿಗಳಲ್ಲೂ ನೀರಿನ ಪೈಪ್ ಮತ್ತು ನಲ್ಲಿ ಅಳವಡಿಸಿ ನೀರು ಪೂರೈಕೆಯಾಗದ ಸಾಧ್ಯತೆಗಳಿರುವುದನ್ನು ತಳ್ಳಿ ಹಾಕುವಂತಿಲ್ಲ.

43.11 ಲಕ್ಷ ಗ್ರಾಮೀಣ ಮನೆಗಳಿಗೆ ಇನ್ನು ಸಿಕ್ಕಿಲ್ಲ ನೀರಿನ ಸಂಪರ್ಕ :
ರಾಜ್ಯದಲ್ಲಿ ಈವರೆಗೆ 1.01 ಕೋಟಿ ಮನೆಗಳ ಪೈಕಿ 58.06 ಲಕ್ಷ ಮನೆಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯಿಂದ ನೀರಿನ ಸಂಪರ್ಕ ಒದಗಿಸಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇನ್ನು 43,11,595 (43.11 ಲಕ್ಷ) ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಲಭಿಸಿಲ್ಲ.

4,473 ಹಳ್ಳಿಗಳಲ್ಲಿ ಒಂದು‌ ಮನೆಗೂ ನೀರಿನ ಸಂಪರ್ಕವಿಲ್ಲ :
ಗ್ರಾಮೀಣ ಕರ್ನಾಟಕದ 4,473 ಹಳ್ಳಿಗಳಲ್ಲಿ ಒಂದು‌ ಮನೆಗೂ ಜಲಜೀವನ್ ಮಿಷನ್ ಯೋಜನೆಯಡಿ ನೀರು ಸಂಪರ್ಕ ದೊರೆತಿಲ್ಲ. 12,771 ಹಳ್ಳಿಗಳಲ್ಲಿ ‘ಮನೆ ಮನೆಗೆ ಗಂಗೆ’ ಯೋಜನೆ ಕಾಮಗಾರಿ ಇನ್ನು ಆರಂಭವಾಗಿಲ್ಲ ಎಂದು ಸ್ವತಃ ಕೇಂದ್ರ ಸರ್ಕಾರವೇ ತಿಳಿಸಿದೆ.

2,341 ಮಾದರಿಗಳ ನೀರು ಕಲುಷಿತ :
2022ರಲ್ಲಿ ಈತನಕ ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ನೀಡಿದ ಕಡೆ, 80 ಅನುಮೋದಿತ ಪ್ರಯೋಗಾಲಯಗಳಲ್ಲಿ 19,265 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 2,341 ಮಾದರಿಗಳ ನೀರು ಕಲುಷಿತಗೊಂಡಿರುವುದನ್ನು ಖಚಿತಪಡಿಸಿದೆ. ಅಂದರೆ ನೀರು ಈ ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಲ ಜೀವನ್ ಅಭಿಯಾನದಡಿ ಗ್ರಾಮೀಣ ಪ್ರದೇಶದಲ್ಲಿ ಹಾಕಿರುವ ಕುಡಿಯುವ ನೀರಿನ ಪೈಪ್

ಸರಿಯಾದ ಯೋಜನೆಯಿಲ್ಲದೆ ಜಾರಿ?:
ಕೆಲವು ಕಡೆಗಳಲ್ಲಿ ಸ್ಥಳೀಯವಾಗಿ ಜಲಜೀವನ್ ಮಿಷನ್ ಮೂಲ ಉದ್ದೇಶದಲ್ಲಿ ಸ್ಥಳೀಯವಾಗಿ ಭೂಮಿ ಮೇಲೆ ಸಿಗುವ ಕೆರೆ, ಕಟ್ಟೆ, ಕಲ್ಯಾಣಿ, ಹೊಳೆ, ಬಾವಿ ನೀರಿನ ಪೂರೈಕೆ ಮೂಲಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಮನೆ ಮನೆಗಳಿಗೆ ಗ್ರಾಮೀಣ ಪ್ರದೇಶದಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು.

ಇದಾವುದೇ ನೀರಿನ ಮೂಲ ಲಭ್ಯವಾಗದಿದ್ದರೆ ಮಾತ್ರ ಬೋರ್ ವೆಲ್ ಆಶ್ರಯಿಸಬೇಕು ಅಂತಿದೆ. ಆದರೆ ಇಲಾಖೆಯಲ್ಲಿ ಈ ಬಗ್ಗೆ ಸೂಕ್ತ ಯೋಜನೆಗಳನ್ನು ರೂಪಿಸದ ಕಾರಣದಿಂದ ದೇಶದಲ್ಲೇ, ಹಳ್ಳಿಗಳಲ್ಲಿ ಶೇ.100ರಷ್ಟು ಮನೆಗಳಿಗೆ ಕುಡಿಯುವ ನೀರು ಪೂರೈಸುವ ಅತಿಹೆಚ್ಚು ಹಳ್ಳಿಗಳನ್ನು ಹೊಂದಿದ ಟಾಪ್-5 ರಾಜ್ಯಗಳ ಪಟ್ಟಿಯಲ್ಲೂ ಕರ್ನಾಟಕ ಸ್ಥಾನ ಪಡೆದಿಲ್ಲ.

ಟಾಪ್-5 ರಾಜ್ಯಗಳಲ್ಲೂ ಕರ್ನಾಟಕಕ್ಕೆ ಲಭಿಸದ ಸ್ಥಾನ
ಬಿಹಾರದ 34,608, ಗುಜರಾತಿನ 16,013, ಮಹಾರಾಷ್ಟ್ರದ 13,695, ಪಂಜಾಬ್ 11,933 ಹಾಗೂ ತೆಲಂಗಾಣದ 10,450 ಹಳ್ಳಿಗಳಲ್ಲಿ ಶೇ.100ಕ್ಕೆ ನೂರರಷ್ಟು ಕ್ರಿಯಾತ್ಮಕ ಮನೆಯ ಟ್ಯಾಪ್ ಸಂಪರ್ಕಗಳನ್ನು (FHTC) ನೀಡಿದೆ ಎಂದು ಕೇಂದ್ರ ಸರ್ಕಾರದ ಇತ್ತೀಚಿನ ಜಲಜೀವನ್ ಮಿಶನ್ ರಿಪೋರ್ಟ್ (31-10-2022) ನಲ್ಲಿ ತಿಳಿಸಿದೆ.

ಈ ಯೋಜನೆಯ ಮುಖ್ಯ ಉದ್ದೇಶಗಳು:
ಪ್ರತಿ ಮನೆಗೆ ಕ್ರಿಯಾತ್ಮಕ ಟ್ಯಾಪ್ ಸಂಪರ್ಕವನ್ನು ಒದಗಿಸುವುದು, ಪ್ರತಿ ವ್ಯಕ್ತಿಗೆ ನಿತ್ಯ 55 ಲೀಟರ್ ಕುಡಿಯುವ (LPCD) ನೀರನ್ನು ಒದಗಿಸಲು ನೀರಿನ ಸಮರ್ಥನೀಯ ಮೂಲಗಳನ್ನು ಖಚಿತಪಡಿಸಿಕೊಳ್ಳುವುದು. ಶುದ್ಧ ನೀರನ್ನು ಖಚಿತಪಡಿಸಿಕೊಳ್ಳಲು ಹೊಸ ಮತ್ತು ಸರಿಯಾದ ತಂತ್ರಜ್ಞಾನದ ಬಳಕೆ. ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆ ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ‘ಮನೆ ಮನೆಗೆ ಗಂಗೆ’ ಯೋಜನೆಯ ಮೂಲ ಉದ್ದೇಶವಾಗಿದೆ. ಆದರೆ ಈಗಾಗಲೇ ನೀರಿನ ಸಂಪರ್ಕ ನೀಡಿರುವ ಕಡೆ ಪ್ರತಿ ವ್ಯಕ್ತಿಗೆ ದಿನನಿತ್ಯ 55 ಲೀಟರ್ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಅನುಮಾನ ಮೂಡಿಸುತ್ತಿದೆ.

ಒಟ್ಟಾರೆ ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೂ ಗಂಗೆ ಬಂದಿಲ್ಲ. ಬಂದಿದ್ದರೂ ಸರಿಯಾಗಿ ಪೂರೈಕೆಯಾಗಿಲ್ಲ. 2024 ರ ವೇಳೆಗೆ ಯೋಜನೆ ರಾಜ್ಯದಲ್ಲಿ ಅಂದುಕೊಂಡಂತೆ ಪೂರ್ಣವಾಗಲು ಮ್ಯಾಜಿಕ್ ಆಗಬೇಕಷ್ಟೆ….!

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...
Previous Post

Lokayukta News | ಲಂಚದ ಹಣಕ್ಕೆ ಬೇಡಿಕೆ : ಲೋಕಾಯುಕ್ತ ಬಲೆಗೆ ಬಿದ್ದ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್

Next Post

ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಅಕ್ಷಮ್ಯ : ಕಿಡಿಗೇಡಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ದೂರು

Next Post

ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಅಕ್ಷಮ್ಯ : ಕಿಡಿಗೇಡಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ದೂರು

#InvestKarnataka2022 | ಮೊದಲ ದಿನವೇ 7.6 ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದ

Please login to join discussion

Like Us on Facebook

Follow Us on Twitter

Recent News

ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮುಂದೂಡಿಕೆ: ತಾಂತ್ರಿಕ ದೋಷವೇ ಕಾರಣ

June 11, 2025
DCM DK Shivakumar

ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

June 10, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮುಂದೂಡಿಕೆ: ತಾಂತ್ರಿಕ ದೋಷವೇ ಕಾರಣ

June 11, 2025
DCM DK Shivakumar

ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

June 10, 2025

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ₹150 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ ಯತ್ನ: ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆ, ತನಿಖೆಗೆ ಆಗ್ರಹ

June 10, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d