Monday, June 9, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ದೇಶದ ರಾಷ್ಟ್ರೀಯ ಆರೋಗ್ಯ ನೀತಿಯ ಗಮನ “ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ” ಅಭಿವೃದ್ಧಿಪಡಿಸುವುದಾಗಿದೆ : ಜೆ.ಪಿ.ನಡ್ಡಾ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

  • Bengaluru Focus

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

    Thug Life | ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯವಿಲ್ಲ : ಕ್ಷಮೆ ಕೇಳಲು ನಿರಾಕರಿಸಿದ ನಟ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
  • Home
  • News Wire

    ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಪೊಲೀಸ್ ಆಯುಕ್ತ ಸೇರಿ 5 ಅಧಿಕಾರಿಗಳ ತಲೆದಂಡ, ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಆದೇಶ

    ಟ್ರಂಪ್ ಆಘಾತಕಾರಿ ನಿರ್ಧಾರ: 12 ದೇಶಗಳ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ, 7 ದೇಶಗಳಿಗೆ ಭಾಗಶಃ ನಿರ್ಬಂಧ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ದೇಶದ ರಾಷ್ಟ್ರೀಯ ಆರೋಗ್ಯ ನೀತಿಯ ಗಮನ “ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ” ಅಭಿವೃದ್ಧಿಪಡಿಸುವುದಾಗಿದೆ : ಜೆ.ಪಿ.ನಡ್ಡಾ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

  • Bengaluru Focus

    ಚೆನಾಬ್ ಸೇತುವೆ ನಿರ್ಮಾಣಕ್ಕೆ 17 ವರ್ಷ ಕಾಲ ಕೊಡುಗೆ ನೀಡಿದ ಪ್ರೊ.ಮಾಧವಿ ಲತಾ: ಬೆಂಗಳೂರು ಐಐಎಸ್‌ಸಿ ಶಿಲಾತಜ್ಞೆಯ ಸಾಧನೆ ಅಂತಿಂತದ್ದಲ್ಲ!!

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ದುರಂತ; ಪೊಲೀಸ್ ಅಧಿಕಾರಿಗಳ ಅಮಾನತು ತೀವ್ರ ಖಂಡಿಸಿದ ಭಾಸ್ಕರ್ ರಾವ್!

    Namma Metro Purple Line

    ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಖ್ಯೆ: ಒಂದು ದಿನದಲ್ಲಿ 9.66 ಲಕ್ಷಕ್ಕೂ ಹೆಚ್ಚು ಜನ ಸಂಚಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ ಪ್ರಕರಣ : ವಿರಾಟ್ ಕೊಹ್ಲಿ ತಂಡದಿಂದ ತೀವ್ರ ಸಂತಾಪ

    ಚಿನ್ನಸ್ವಾಮಿ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

    ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ

    ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

    ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

    Thug Life | ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯವಿಲ್ಲ : ಕ್ಷಮೆ ಕೇಳಲು ನಿರಾಕರಿಸಿದ ನಟ

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result
Bengaluru Wire
No Result
View All Result
Home Bengaluru Focus

PROPERTY TAX | ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡ ಮಾಲೀಕರಿಗೆ ನೋಟಿಸ್ ನೀಡುವಲ್ಲೂ ಎಡವಿದ ಬಿಬಿಎಂಪಿ ; ನಾಲ್ಕು ವರ್ಷದಿಂದ ರೆವಿನ್ಯೂ ಸಿಬ್ಬಂದಿ ಮಾಡಿದ್ದೇನು?

4 ವರ್ಷದಲ್ಲಿ 78,524 ಆಸ್ತಿ ಮಾಲೀಕರಿಂದ ತಪ್ಪಾಗಿ ವಲಯ ವರ್ಗೀಕರಿಸಿ ಆಸ್ತಿ ತೆರಿಗೆ ಘೋಷಣೆ| ಬಿಬಿಎಂಪಿ ಆಸ್ತಿ ತೆರಿಗೆ ತಂತ್ರಾಂಶದಿಂದ ಈ ಅಂಶ ಬಯಲು| ಮತ್ತಷ್ಟು ಪ್ರಕರಣಗಳನ್ನು ಪತ್ತೆ ಹಚ್ಚುತ್ತಿರುವ ಸಿಬ್ಬಂದಿ | ಹಳೆಯ ಬಾಕಿ ಉಳಿಸಿಕೊಂಡವರ ಬಡ್ಡಿ ದರ ಇಳಿಸಿದ ಸರ್ಕಾರ | ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಹೆಚ್ಚಿದ ಒಲವು

by Bengaluru Wire Desk
June 2, 2021
in Bengaluru Focus, BW Special
Reading Time: 1 min read
0

ಬೆಂಗಳೂರು :  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ತಪ್ಪು ತಪ್ಪಾಗಿ ವಲಯ ವರ್ಗೀಕರಣ ಘೋಷಿಸಿಕೊಂಡ 78 ಸಾವಿರ ಆಸ್ತಿಗಳಿಗೆ ಪಾಲಿಕೆಯ ಆಸ್ತಿ ತೆರಿಗೆ ತಂತ್ರಾಂಶದಿಂದ ನೋಟಿಸ್ ಜನರೇಟ್ ಆಗಿದೆ. ಮಾರ್ಚ್ ನಲ್ಲೇ ಇಷ್ಟು ನೋಟಿಸ್ ಗಳು ಜನರೇಟ್ ಆದರೂ ಪಾಲಿಕೆ ಕಂದಾಯ ಅಧಿಕಾರಿಗಳು ಈತಕ ವಲಯ ವರ್ಗೀಕರಣದಡಿ ತಪ್ಪಾಗಿ ಆಸ್ತಿ ತೆರಿಗೆ ಘೋಷಿಸಿಕೊಂಡ ಕೇವಲ 1,021 ಜನರಿಗೆ ಮಾತ್ರ ದುಪ್ಪಟ್ಟು ದಂಡ ಹಾಗೂ ಬಡ್ಡಿಯೊಂದಿಗೆ ವ್ಯತ್ಯಾಸದ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.

481 ಆಸ್ತಿ ಮಾಲೀಕರು ಸ್ವಯಂಪ್ರೇರಿತವಾಗಿ ಆನ್ ಲೈನ್ ನಲ್ಲಿ ಪರಿಶೀಲನೆ ನಡೆಸಿ ತಾವೇ ಖುದ್ದಾಗಿ ಬಡ್ಡಿ, ದುಪ್ಪಟ್ಟು ದಂಡದೊಂದಿಗೆ ವ್ಯತ್ಯಾಸದ ಮೊತ್ತದ ಹಣವನ್ನು ಕಟ್ಟಿದ್ದಾರೆ. ಅಲ್ಲಿಗೆ ತಪ್ಪಾಗಿ ವಲಯ ವರ್ಗೀಕರಣ ಘೋಷಿಸಿಕೊಂಡ ಒಟ್ಟು 1,502 ಆಸ್ತಿ ಮಾಲೀಕರು (ಜೂ.2ರ ತನಕ) ಒಟ್ಟು 3.57 ಕೋಟಿ ರೂಪಾಯಿ ಆಸ್ತಿ ತೆರಿಗೆ ಹಣವನ್ನು ಪಾಲಿಕೆಗೆ ಕಟ್ಟಿದ್ದಾರೆ.

ಬಿಬಿಎಂಪಿಯ ಕೇಂದ್ರ ಕಚೇರಿ ಹಾಗೂ 8 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಕಂದಾಯ ವಿಭಾಗದಲ್ಲಿ 30 ಕಂದಾಯ ಅಧಿಕಾರಿಗಳು, 64 ಸಹಾಯಕ ಕಂದಾಯ ಅಧಿಕಾರಿಗಳು, 400 ಮಂದಿ ರೆವಿನ್ಯೂ ಇನ್ಸ್ ಪೆಕ್ಟರ್ ಹಾಗೂ ಮೌಲ್ಯ ಮಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟು ಜನ ಅಧಿಕಾರಿಗಳಿದ್ದೂ ವ್ಯತ್ಯಾಸ ಮೊತ್ತದ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿಲ್ಲ.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 15 ದಿನದ ಕಾಲಾವಧಿಯಲ್ಲಿ ಪಾಲಿಕೆಯ ಆಸ್ತಿ ತೆರಿಗೆ ತಂತ್ರಾಂಶದ ಮೂಲಕ 2016-17ನೇ ಸಾಲಿನಿಂದ 2019-20ನೇ ಸಾಲಿನ ತನಕದ ಅವಧಿಯಲ್ಲಿ ಸ್ವಯಂ ಘೋಷಣೆ ಆಸ್ತಿ ತೆರಿಗೆ  ಪದ್ಧತಿ (ಎಸ್ ಎಎಸ್ ) ಯಡಿ ಕಡಿಮೆ ಆಸ್ತಿ ತೆರಿಗೆ ಕಟ್ಟುವ ಸಲುವಾಗಿ ತಪ್ಪು ವಲಯ ವರ್ಗೀಕರಣದಡಿ ಆಸ್ತಿ ಘೋಷಣೆ ಮಾಡಿಕೊಂಡ ಪ್ರಕರಣಗಳನ್ನು ಸಾಫ್ಟ್ ವೇರ್ ಸಹಾಯದಿಂದ ಗುರ್ತಿಸಿ ನೋಟಿಸ್ ಸಿದ್ಧಪಡಿಸಲಾಗಿತ್ತು.

2016-17 ರಿಂದಲೇ ಕಂದಾಯ ಇಲಾಖೆ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಿ, ಆಸ್ತಿ ಪಾವತಿಸುವವರ ಮೇಲೆ ಹದ್ದುಗಣ್ಣು ಇಟ್ಟಿದ್ದರೆ 78,524 ನೋಟಿಸ್ ಜನರೇಟ್ ಆಗುವ ಪ್ರಮೇಯ ಬರುತ್ತಿರಲಿಲ್ಲ. ಅಂದರೆ ಅಷ್ಟರ ಮಟ್ಟಿಗೆ ಆಸ್ತಿ ಮಾಲೀಕರು ತಪ್ಪು ಮಾಡುತ್ತಿದ್ದರೂ, ರೆವೆನ್ಯೂ ಅಧಿಕಾರಿಗಳು ಮತ್ತು ಸಿಬ್ಬಂದಿ ಕಣ್ಣು ಮುಚ್ಚಿ ಕುಳಿತಿದ್ದರಾ ಎಂಬ ಪ್ರಶ್ನೆ ಎದುರಾಗುತ್ತದೆ.

ವಲಯ ವರ್ಗೀಕರಣ ಹೇಗೆ ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯಾ ಪ್ರದೇಶದ ವ್ಯಾಪ್ತಿಯಲ್ಲಿ ನಿಗಧಿಪಡಿಸಿರುವ ಆಸ್ತಿಯ ಮಾರ್ಗಸೂಚಿ ದರದ ಆಧಾರದ ಮೇಲೆ ಎ ವಲಯದಿಂದ ಎಫ್ ವಲಯದ ತನಕ 6 ರೀತಿಯ ವಲಯ ವರ್ಗೀಕರಣವನ್ನು ಪಾಲಿಕೆ ಮಾಡಿದೆ. ಇದನ್ನು ಆಧಾರವಾಗಿಟ್ಟುಕೊಂಡು ಆ ವಲಯ ವರ್ಗೀಕರಣದ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತಮ್ಮ ಆಸ್ತಿಗಳ ತೆರಿಗೆಯನ್ನು ಲೆಕ್ಕ ಹಾಕಿ ಪಾಲಿಕೆಗೆ ತೆರಿಗೆ ಪಾವತಿಸಬೇಕು. ಆದರೆ ಎಷ್ಟೋ ವೇಳೆ ಅತಿಹೆಚ್ಚು ಮಾರ್ಗಸೂಚಿ ದರವಿರುವ ಎ- ವಲಯ ವ್ಯಾಪ್ತಿಯ ಆಸ್ತಿ ಮಾಲೀಕರು ಬಿ ಅಥವಾ ಸಿ ವಲಯದಲ್ಲಿರುವ ಆಸ್ತಿಗಳನ್ನು ಘೋಷಿಸಿಕೊಂಡರೆ ಅಷ್ಟರ ಮಟ್ಟಿಗೆ ಕಡಿಮೆ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಕಟ್ಟುತ್ತಿದ್ದರು.

ತಪ್ಪಾಗಿ ವಲಯ ವರ್ಗೀಕರಣ ಘೋಷಿಸಿಕೊಂಡವರ ಮೇಲೆ ಏನು ಕ್ರಮ?

ಜೋನಲ್ ಕ್ಲಾಸಿಫಿಕೇಶನ್ ಅಥವಾ ವಲಯ ವರ್ಗೀಕರಣದ ನಿಯಮಾವಳಿ ಅನ್ವಯ ತಪ್ಪಾಗಿ ಆಸ್ತಿ ವರ್ಗೀಕರಣ ಮಾಡಿಕೊಂಡು ಪ್ರಾಪರ್ಟಿ ಟ್ಯಾಕ್ಸ್ ಕಟ್ಟಿದ ಆಸ್ತಿಗಳ ವಿವರವನ್ನು ಪಾಲಿಕೆಯ ಆಸ್ತಿ ತಂತ್ರಾಂಶ ಪತ್ತೆ ಹಚ್ಚಿದೆ. ಹೀಗೆ ಪತ್ತೆ ಹಚ್ಚಿದ 78,524 ನೋಟಿಸ್ ಗಳ ಆಸ್ತಿ ಮಾಲೀಕರಿಗೆ ಕಂದಾಯ ವಿಭಾಗದವರು ವ್ಯತ್ಯಾಸ ಆಸ್ತಿ ತೆರಿಗೆ ಮೊತ್ತದೊಂದಿಗೆ ದುಪ್ಪಟ್ಟು ದಂಡ ಹಾಗೂ ವ್ಯತ್ಯಾಸದ ಮೊತ್ತಕ್ಕೆ ಬಡ್ಡಿಯನ್ನು ಸೇರಿಸಿ ಡಿಮ್ಯಾಂಡ್ ನೋಟಿಸ್ ನೀಡಲಿದ್ದಾರೆ. ಉದಾಹರಣೆಗೆ ; ವಲಯ ವರ್ಗೀಕರಣದಲ್ಲಿ 100 ರೂಪಾಯಿ ವ್ಯತ್ಯಾಸದ ಆಸ್ತಿ ತೆರಿಗೆ ಕಂಡು ಬಂದರೆ, ವ್ಯತ್ಯಾಸ ಮೊತ್ತ ಹಾಗೂ ಅದಕ್ಕೆ ಎರಡು ಪಟ್ಟು ದಂಡವಾದ 200 ರೂಪಾಯಿ ಹಾಗೂ ಬಡ್ಡಿಯೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ.

ಕೋವಿಡ್ ಡ್ಯೂಟಿ ನೆಪದಲ್ಲಿ ನೇಪಥ್ಯಕ್ಕೆ ಸೇರಿತಾ ನೋಟಿಸ್ ಜಾರಿ ಕಾರ್ಯ?

ಏಪ್ರಿಲ್ 10 ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದು, ಕಂದಾಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೋವಿಡ್ ನಿಯಂತ್ರಣ ಕೆಲಸಗಳಿಗೆ ನೇಮಿಸಿದ್ದಾರೆ. ಆದರೆ ಅದೇ ವೇಳೆಯಲ್ಲೂ ಆಸ್ತಿ ತೆರಿಗೆ ಸಂಗ್ರಹದ ಬಗ್ಗೆಯೂ ಗಮನ ಹರಿಸಿಲ್ಲ. ಪಾಲಿಕೆ ಆಡಳಿತಾಧಿಕಾರಿಗಳು ತಮ್ಮ ಮೊದಲ ಸಭೆಯಲ್ಲಿ ಪಾಲಿಕೆಯ ಪ್ರಮುಖ ಆದಾಯದ ಮೂಲವಾದ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಆದರೆ ಕೆಲವು ಸಿಬ್ಬಂದಿ ಕೋವಿಡ್ ಸಂದರ್ಭದ ನೆಪವೊಡ್ಡಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ.

ಇನ್ನು ವಲಯಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿಗಳ ಹಂತದಲ್ಲಿ, 2016-17 ರಿಂದ 2019-20ರ ತನಕದ 4 ವರ್ಷದ ಅವಧಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿ ಕೇವಲ 1,867 ಆಸ್ತಿಗಳ ಮಾಲೀಕರುಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಿದ್ದಾರೆ. ಅದರಲ್ಲಿ 82 ಆಸ್ತಿ ಮಾಲೀಕರು ಪಾಲಿಕೆಯ ಡಿಮ್ಯಾಂಡ್ ನೋಟಿಸ್ ಗೆ ತಮ್ಮ ಆಕ್ಷೇಪಣೆ ಸಲ್ಲಿಸಿದ್ದಾರೆ. ಕೇವಲ 895 ಜನರು ಮಾತ್ರ ದಂಡವೂ ಸೇರಿ 2.85 ಕೋಟಿ ರೂಪಾಯಿ ಹಣವನ್ನು ಆಸ್ತಿ ತೆರಿಗೆ ರೂಪದಲ್ಲಿ ಪಾಲಿಕೆಗೆ ಕಟ್ಟಿದ್ದಾರೆ.

ಹಳೆಯ ಬಾಕಿ ಬಡ್ಡಿದರ ವಾರ್ಷಿಕ ಶೇ.9ಕ್ಕೆ ಇಳಿಕೆ ಮಾಡಿದ ಬಿಬಿಎಂಪಿ :

ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಪಾಲಿಕೆ ಕೊಂಚ ರಿಲೀಫ್ ನೀಡಿದೆ. ಇಲ್ಲಿಯ ತನಕ ಆಸ್ತಿ ತೆರಿಗೆಯ ಹಳೆಯ ಬಾಕಿಗೆ ಪ್ರತಿ ತಿಂಗಳಿಗೆ ಶೇ.2ರಷ್ಟಂತೆ ವರ್ಷಕ್ಕೆ ಶೇ.24ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಆದರೆ ಯಾವಾಗ 2020ರ ಬಿಬಿಎಂಪಿ ಕಾಯ್ದೆ ಜಾರಿಯಾದ ಬಳಿಕ ದಂಡದ ಬಡ್ಡಿಯ ಪ್ರಮಾಣವನ್ನು ವಾರ್ಷಿಕ 9ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲಿಗೆ ಶೇ.15ರಷ್ಟು ಬಡ್ಡಿ ದರವನ್ನು ಇಳಿಕೆ ಮಾಡಿದಂತಾಗಿದೆ. ಈ ಕುರಿತಂತೆ ಬಿಬಿಎಂಪಿಯ ತೆರಿಗೆ ಪಾವತಿ ಸಾಫ್ಟ್ ವೇರ್ ನಲ್ಲೂ ಪೂರಕವಾದ ಮಾರ್ಪಾಡನ್ನು ಮಾಡಲಾಗಿದೆ. ಇದರಿಂದ ಅನೇಕ ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಅನುಕೂಲವಾಗಲಿದೆ ಎಂದು ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈತನಕ 8.60 ಲಕ್ಷ ಆಸ್ತಿ ಮಾಲೀಕರಿಂದ ತೆರಿಗೆ ಪಾವತಿ :

ಬಿಬಿಎಂಪಿ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಒಟ್ಟು 17.3 ಲಕ್ಷ ಆಸ್ತಿಗಳು ಸೇರಿಕೊಂಡಿದ್ದು, ಜೂನ್ 1ರ ತನಕ 8,60,463 ಮಂದಿ 2021-22 ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಿದ್ದಾರೆ. ಪ್ರತಿ ಆರ್ಥಿಕ ವರ್ಷದ ಆರಂಭವಾಗುವ ಏಪ್ರಿಲ್ ತಿಂಗಳ ಕೊನೆಯ ದಿನದ ತನಕ ಒಂದೇ ಬಾರಿಗೆ ಆಸ್ತಿ ತೆರಿಗೆ ಸಲ್ಲಿಸುವವರಿಗೆ ಶೇ.5ರಷ್ಟು ಆಸ್ತಿ ತೆರಿಗೆ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕರೋನಾ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಲಾಕ್ ಡೌನ್ ಕಾರಣಕ್ಕೆ ಮೇ.31ರ ವರೆಗೆ ಹಾಗೂ ಆನಂತರ ಜೂನ್ 30ರ ತನಕ ಎರಡನೇ ಬಾರಿಗೆ ಆಸ್ತಿ ತೆರಿಗೆ ಪಾವತಿಗೆ ನಗರಾಭಿವೃದ್ಧಿ ಇಲಾಖೆ ಅವಧಿಯನ್ನು ವಿಸ್ತರಣೆ ಮಾಡಿದೆ.

ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಒಲವು :

ಏಪ್ರಿಲ್ 1 ರಿಂದ ಜೂನ್ 2 ತನಕ ಪಾಲಿಕೆ ವ್ಯಾಪ್ತಿಯಲ್ಲಿ 1,287 ಕೋಟಿ ರೂಪಾಯಿ ಆಸ್ತಿ ತೆರಿಗೆ ಹಣ ಸಂಗ್ರಹವಾಗಿದೆ. ಆ ಪೈಕಿ 6.79 ಲಕ್ಷ ಜನರು ಆನ್ ಲೈನ್ ಮೂಲಕ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟಿದ್ದಾರೆ. ಇನ್ನು 1.70 ಲಕ್ಷ ಆಸ್ತಿ ಮಾಲೀಕರು ಬ್ಯಾಂಕಿನಿಂದ ಚಲನ್ ಪಡೆದು ಪ್ರಾಪರ್ಟಿ ಟ್ಯಾಕ್ಸ್ ಪಾವತಿಸಿದ್ದಾರೆ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...
Previous Post

ಬೆಂಗಳೂರು ಜಿಲ್ಲಾಧಿಕಾರಿಗಳಿಂದ ಉತ್ತರ – ದಕ್ಷಿಣ ತಾಲೂಕು ಕಚೇರಿಗೆ ಹಠಾತ್ ಭೇಟಿ ಪರಿಶೀಲನೆ

Next Post

IAS Shilpa Nag | ಮೈಸೂರು ಐಎಎಸ್ ಅಧಿಕಾರಿಗಳ ನಡುವಣ ಶೀಥಲ ಸಮರ ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡೆಯಿಂದ ಬೇಸೆತ್ತು ರಾಜಿನಾಮೆ ನೀಡಿದ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್

Next Post

IAS Shilpa Nag | ಮೈಸೂರು ಐಎಎಸ್ ಅಧಿಕಾರಿಗಳ ನಡುವಣ ಶೀಥಲ ಸಮರ ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡೆಯಿಂದ ಬೇಸೆತ್ತು ರಾಜಿನಾಮೆ ನೀಡಿದ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್

Don't Blame Bengaluru | "ಡೋಂಟ್ ಬ್ಲೇಮ್ ಬೆಂಗಳೂರು" - ಆಡಿಯೋ ನಾಳೆ ಬಿಡುಗಡೆ

Please login to join discussion

Like Us on Facebook

Follow Us on Twitter

Recent News

Inspirational News | ಎನ್‌ಸಿಸಿ ಕೆಡೆಟ್‌ಗಳ ಎವರೆಸ್ಟ್ ವಿಜಯ: ಅಸಾಧ್ಯವನ್ನು ಸಾಧಿಸಿದ ಹದಿಹರೆಯದ ವೀರರು : ಕೆಡಿಟ್ ಗಳ ಅನುಭವ ಇಲ್ಲಿದೆ

June 9, 2025

ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

June 8, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Inspirational News | ಎನ್‌ಸಿಸಿ ಕೆಡೆಟ್‌ಗಳ ಎವರೆಸ್ಟ್ ವಿಜಯ: ಅಸಾಧ್ಯವನ್ನು ಸಾಧಿಸಿದ ಹದಿಹರೆಯದ ವೀರರು : ಕೆಡಿಟ್ ಗಳ ಅನುಭವ ಇಲ್ಲಿದೆ

June 9, 2025

ರಾಷ್ಟ್ರೀಯ ತನಿಖಾ ದಳಕ್ಕೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಭಯೋತ್ಪಾದನಾ ಕೃತ್ಯದ ಆಯಾಮದಲ್ಲಿ ತನಿಖೆಗೆ ಆದೇಶ

June 8, 2025
ವಿಧಾನಸೌಧದ ಸಾಂದರ್ಭಿಕ ಚಿತ್ರ

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಅವಧಿ ಜೂ.22 ರ ತನಕ ವಿಸ್ತರಣೆ

June 8, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d